Advertisement

ಆರಿಫ್ ನನ್ನು ನೋಡಿ ಸಾರಸ್‌ ಕ್ರೇನ್‌ ಮಾಡಿದ್ದೇನು?

07:54 PM Apr 11, 2023 | Team Udayavani |

ಉತ್ತರಪ್ರದೇಶದ ಆರಿಫ್ ಖಾನ್‌ ಮತ್ತು ಸಾರಸ್‌ ಕ್ರೇನ್‌ ನಡುವಿನ ಸ್ನೇಹ ಮತ್ತೂಮ್ಮೆ ಜಗಜ್ಜಾಹೀರಾಗಿದೆ. ಖಾನ್‌ ಈ ಪಕ್ಷಿಯನ್ನು ಸಾಕುತ್ತಿರುವುದು ಸುದ್ದಿಯಾಗುತ್ತಿದ್ದಂತೆ, ಅರಣ್ಯ ಇಲಾಖೆ ಅಧಿಕಾರಿಗಳು ಸಾರಸ್‌ ಕ್ರೇನ್‌ ಅನ್ನು ತಮ್ಮ ವಶಕ್ಕೆ ಪಡೆದು, ಕಾನ್ಪುರ ಝೂನಲ್ಲಿ ಇಟ್ಟಿದ್ದರು.

Advertisement

ಆರಿಫ್ ಗೂ ನೋಟಿಸ್‌ ಜಾರಿ ಮಾಡಿದ್ದರು. ಮಂಗಳವಾರ ಆರಿಫ್ ತನ್ನ ಸ್ನೇಹಿತ ಸಾರಸ್‌ ಕ್ರೇನ್‌ ಅನ್ನು ನೋಡಲೆಂದು ಕಾನ್ಪುರ ಪ್ರಾಣಿ ಸಂಗ್ರಹಾಲಯಕ್ಕೆ ಹೋಗಿದ್ದಾರೆ. ಅವರನ್ನು ನೋಡುತ್ತಿದ್ದಂತೆಯೇ, ಪಂಜರದೊಳಗಿದ್ದ ಸಾರಸ್‌ ಕ್ರೇನ್‌ ಒಂದೇ ಸಮನೆ ಕುಣಿದಾಡಿದ್ದು, ತಾನಿರುವ ಪಂಜರದೊಳಗೇ ಆ ಕಡೆಗೊಮ್ಮೆ, ಈ ಕಡೆಗೊಮ್ಮೆ ಓಡುತ್ತಾ ಕೂಗತೊಡಗಿದೆ.

ಆದರೆ, ಅದನ್ನು ಮುಟ್ಟುವ ಅವಕಾಶವೂ ಆರಿಫ್ಗೆ ನೀಡಿರಲಿಲ್ಲ. ಈ ದೃಶ್ಯ ನೋಡಿದವರ ಕಣ್ಣು ತುಂಬಿ ಬಂದಿದೆ. ಅನೇಕರು ಟ್ವೀಟ್‌ ಮಾಡಿ, “ತನಗೆ ಜೀವದಾನ ನೀಡಿ ಸ್ವಂತ ಮಗುವಿನಂತೆ ನೋಡಿಕೊಂಡ ಆರಿಫ್ ಮೇಲೆ ಅದಕ್ಕಿರುವ ಪ್ರೀತಿ ಒಂದಿನಿತೂ ಕಡಿಮೆಯಾಗಿಲ್ಲ. ದಯವಿಟ್ಟು ಅದನ್ನು ಆರಿಫ್ ಜತೆಗೆ ಕಳುಹಿಸಿಕೊಡಿ’ ಎಂದು ಕೇಳಿಕೊಂಡಿದ್ದಾರೆ.


 

Advertisement

Udayavani is now on Telegram. Click here to join our channel and stay updated with the latest news.

Next