Advertisement

ಆಸ್ತಿ ವಿಚಾರ: ಯುವಕನ ಬಾಯಿಗೆ ಕಬ್ಬಿಣದ ಸರಳು ಹಾಕಿ ಕೊಲೆ

08:50 PM Oct 08, 2022 | Team Udayavani |

ತಿರುವನಂತಪುರ: ಆಸ್ತಿ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ಸಂಬಂಧಿ ಯುವಕನ ಬಾಯಿಗೆ ಕಬ್ಬಿಣದ ಸರಳು ಹಾಕಿ ಕೊಲೆ ಮಾಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

Advertisement

ಬುಡಕಟ್ಟು ಸಮುದಾಯಕ್ಕೆ ಸೇರಿರುವ ರಮೇಶ(25) ಮೃತ ಯುವಕ. ರಮೇಶ ಹಾಗೂ ಸಂಬಂಧಿ ಸುರೇಶನ ನಡುವೆ ಆಸ್ತಿ ವಿಚಾರದಲ್ಲಿ ಶುಕ್ರವಾರ ರಾತ್ರಿ ಜಗಳವಾಗಿದೆ.

ಕುಡಿದ ಮತ್ತಿನಲ್ಲಿದ್ದ ಸುರೇಶ, ಸಿಟ್ಟಿನಿಂದ ರಮೇಶನಿಗೆ ಕಬ್ಬಿಣದ ಸರಳಿನಲ್ಲಿ ಹೊಡೆದಿದ್ದಾನೆ. ನಂತರ ಅದೇ ಸರಳನ್ನು ರಮೇಶನ ಬಾಯಿಗೂ ಹಾಕಿದ್ದಾನೆ.

ರಮೇಶ ಸಾವನ್ನಪ್ಪಿದ್ದಾನೆ ಎಂದು ತಿಳಿದ ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ವಿಚಾರದಲ್ಲಿ ಪೊಲೀಸ್‌ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಹುಡುಕಿ, ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next