Advertisement

ನನ್ನ ಬೇಡಿಕೆಗೂ ಬೆಂಬಲ ಕೊಡಿ; ಅಣ್ಣಾ ಹಜಾರೆಯತ್ತ ಶೂ ಬಾಣ!

10:14 AM Mar 30, 2018 | Team Udayavani |

ನವದೆಹಲಿ: ಕಳೆದ 6 ದಿನಗಳಿಂದ ದೆಹಲಿಯಲ್ಲಿ ನಿರಶನ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಗುರುವಾರ ಉಪವಾಸ ಅಂತ್ಯಗೊಳಿಸಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಶೂ ಎಸೆದ ಘಟನೆ ನಡೆದಿತ್ತು.

Advertisement

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ತನ್ನ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸದಿರುವುದಕ್ಕೆ ಅಸಮಾಧಾನಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಶೂ ಎಸೆದ ವ್ಯಕ್ತಿಯನ್ನು ರಾಜ್ ಕುಮಾರ್ ಸೈನಿ ಎಂದು ಗುರುತಿಸಲಾಗಿದ್ದು, ಬಳಿಕ ಈತನನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

ಭಾರತ-ಪಾಕ್ ಗಡಿಯಲ್ಲಿ ಅಕ್ರಮ ನುಸುಳುವಿಕೆ ಹಾಗೂ ಅಪ್ರಚೋದಿತ ಗುಂಡಿನ ದಾಳಿ ತಡೆಯುವ ನಿಟ್ಟಿನಲ್ಲಿ ಗೋಡೆಯನ್ನು ನಿರ್ಮಿಸಬೇಕೆಂಬುದು ಸೈನಿ ಬೇಡಿಕೆಯಾಗಿತ್ತು. ಆದರೆ ಅಣ್ಣಾ ಹಜಾರೆ ಈ ಬೇಡಿಕೆಯನ್ನು ಒಪ್ಪಿಕೊಂಡಿರಲಿಲ್ಲವಾಗಿತ್ತು. ಇದರಿಂದ ಆಕ್ರೋಶಿತಗೊಂಡ ಸೈನಿ ಹಜಾರೆಯತ್ತ ಶೂ ಎಸೆದಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next