Advertisement

Ullal ಮಾಡೂರು: ಯುವಕ ಆತ್ಮಹತ್ಯೆ

01:40 AM Jan 17, 2024 | Team Udayavani |

ಉಳ್ಳಾಲ: ಮಾಡೂರು ಅಯ್ಯಪ್ಪ ಭಜನ ಮಂದಿರ ಸಮೀಪ ನಿವಾಸಿ ನಾಗರಾಜ್‌ ಶೆಟ್ಟಿ (32) ಮನೆಯಲ್ಲಿ ಆತ್ಮಹತ್ಯೆಗೈದಿದ್ದು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕೋಟೆಕಾರು ಬೀರಿಯಲ್ಲಿರುವ ಈಕಾರ್ಟ್‌ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ನಾಗರಾಜ್‌ ಆತ್ಮಹತ್ಯೆಗೈದಿದ್ದು, ಇವರ ಸಹೋದರಿಯ ಪ್ರಸವ ಹಿನ್ನೆಲೆಯಲ್ಲಿ ತಾಯಿ ಆಕೆಯ ಮಂಗಳೂರಿನ ಮನೆಯಲ್ಲಿದ್ದು, ಕಿರಿಯ ಸಹೋದರ ಹಾಗೂ ದೊಡ್ಡಮ್ಮ ಮನೆ ಯಲ್ಲಿದ್ದರು. ನಾಗರಾಜ್‌ ಮನೆಯ ಕೋಣೆ ಬಾಗಿಲು ತೆರೆಯದೇ ಇರುವುದನ್ನು ಗಮನಿಸಿ ಮನೆಮಂದಿ ಒಡೆದು ಗಮನಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಚೆಂಬುಗುಡ್ಡೆ ಸೇವಂತಿಗುಡ್ಡೆಯಲ್ಲಿ ನೆಲೆಸಿದ್ದ ಕುಟುಂಬ ಐದು ವರ್ಷಗಳ ಹಿಂದಷ್ಟೇ ಮಾಡೂರು ಸಮೀಪ ಮನೆಯನ್ನು ಖರೀದಿಸಿ ನೆಲೆಸಿದ್ದರು. ಕಿರಿಯ ಸಹೋದರನಿಗೂ ವಿವಾಹ ನಿಶ್ಚಯವಾಗಿದ್ದು, ನಾಗರಾಜ್‌ ಮಾತ್ರ ವಿವಾಹವಾಗುವುದಿಲ್ಲ ಎಂದು ಉಳಿದಿದ್ದರು. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next