Advertisement

RSS ಡ್ರಿಲ್‌ ಮುಗಿಸಿ ಮರಳುತ್ತಿದ್ದ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ

11:49 AM Oct 17, 2017 | udayavani editorial |

ಲೂಧಿಯಾನ : ಬೆಳಗ್ಗಿನ ಆರ್‌ಎಸ್‌ಎಸ್‌ ಕವಾಯತನ್ನು ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಇಲ್ಲಿನ ಕೈಲಾಶ್‌ ನಗರದಲ್ಲಿ, ಮೋಟರ್‌ ಬೈಕಿನಲ್ಲಿ ಬಂದ ಇಬ್ಬರು ತರುಣರು ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಮೃತ ವ್ಯಕ್ತಿಯನ್ನು ರವೀಂದ್ರ ಗೋಸೇನ್‌ (60) ಎಂದು ಗುರುತಿಸಲಾಗಿದೆ. 

ಗೋಸೇನ್‌ ಅವರು ಎಂದಿನಂತೆ ಇಂದು ಬೆಳಗ್ಗೆ ಆರ್‌ಎಸ್‌ಎಸ್‌ ಶಾಖೆಯಲ್ಲಿ ಬೆಳಗ್ಗಿನ ಕವಾಯತಿನಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದರು. ಆಗ ಬೈಕಿನಲ್ಲಿ ಬಂದ ಅಪರಿಚಿತ ತರುಣರಿಬ್ಬರು ಗೋಸೇನ್‌ ಅವರ ಮೇಲೆ ಗುಂಡನ್ನು ಹಾರಿಸಿ ದಾಳಿ ಮಾಡಿದರು. ಗೋಸೇನ್‌ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟರು ಎಂದು ನಗರ ಆರ್‌ಎಸ್‌ಎಸ್‌ ಕಾರ್ಯದರ್ಶಿ ಯಶ್‌ ಗಿರಿ ತಿಳಿಸಿದರು. 

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಅಪರಿಚಿತ ಹಂತಕರಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next