Advertisement

ವಾರ್ನಿಂಗ್ ಕೊಟ್ಟವನ ಮೇಲೆ‌ ಸೇಡು: ತಾನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ ಪ್ರೇಮಿ

06:31 PM Jul 22, 2023 | Team Udayavani |

ರಾಮನಗರ: ಪ್ರೀತಿಸಿದ ಯುವತಿಯ ಮನೆಯವರು ಯುವಕನನ್ನು ಅಪಹರಿಸಿ ಬೆಂಕಿಯಿಂದ ಸುಟ್ಟ ಘಟನೆಗೆ ಇದೀಗ ತಿರುವುದು ದೊರೆತಿದ್ದು, ಯುವಕ ತಾನೇ ಬೆಂಕಿ ಹಚ್ಚಿಕೊಂಡು ನಾಟಕವಾಡಿರುವುದು ಬೆಳಕಿಗೆ ಬಂದಿದೆ.

Advertisement

ಶಶಾಂಕ್ ಎಂಬ ಯುವಕ ಕಿಡ್ನ್ಯಾಪ್ ಮತ್ತು ಬೆಂಕಿ ಹಚ್ಚಿರುವ ನಾಟಕವಾಡಿದ್ದಾನೆ. ಇದಕ್ಕೆ ಕಾರಣ ಆತ ಪ್ರೀತಿಸಿದ ಯುವತಿಯ ದೊಡ್ಡಪ್ಪ ಮನೆಗೆ ಬಂದು ಬೆದರಿಕೆಯೊಡ್ಡಿದ್ದು ಎನ್ನಲಾಗಿದೆ.

ಯುವತಿಯ ದೊಡ್ಡಪ್ಪ ಮನು ಶಶಾಂಕ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದ. ಅಲ್ಲದೆ ಜೀವ ಬೆದರಿಕೆ ಹಾಕಿದ್ದ. ಇದರಿಂದ ಕೆರಳಿದ್ದ ಶಶಾಂಕ್, ವಾರ್ನಿಂಗ್ ಕೊಟ್ಟ ಮನು ಮೇಲೆ‌ ಸೇಡು ತೀರಿಸಿಕೊಳ್ಳಲ ಪ್ಲಾನ್ ಮಾಡಿದ್ದ. ಹೀಗಾಗಿ ಕಿಡ್ನ್ಯಾಪ್ ಮತ್ತು ಬೆಂಕಿ ಕಥೆ ಕಟ್ಟಿದ್ದಾನೆ.

ಪೊಲೀಸರಿಗೆ ಕಿಡ್ನಾಪ್ ಮಾಡಿ ಬೆಂಕಿ ಹಚ್ಚಿರುವುದಾಗಿ ಕಥೆ ಕಟ್ಟಿದ್ದ ಶಶಾಂಕ್, ತಾನೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿ ಹಚ್ಚಿಕೊಂಡ ಬಳಿಕ ಯುವತಿಯ ದೊಡ್ಡಪ್ಪನ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದ ಶಶಾಂಕ್, ‘ನಿನ್ನ ಗಂಡ ನನಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾನೆ’ ಎಂದು ಹೇಳಿಕೊಂಡ. ಆದರೆ ‘ತನ್ನ ಗಂಡ ಪಕ್ಕದಲ್ಲೇ ಇದ್ದಾನೆ’ ಎಂದು ಶಶಾಂಕ್‌ ಗೆ ಮನು ಪತ್ನಿ ವಿಡಿಯೋ ಕಾಲ್‌ ನಲ್ಲೇ ತೋರಿಸಿದ್ದಾರೆ. ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಶಶಾಂಕ್ ವಿರುದ್ಧ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next