Advertisement

Video: ಬೈಕ್‌ನಲ್ಲಿ ಚಲಿಸುವ ವೇಳೆ ಹಾವು ಕಡಿತ; ಸೆರೆ ಹಿಡಿದ ಹಾವಿನಿಂದಲೇ ಪ್ರಾಣ ಹಾನಿ.!

05:29 PM Sep 24, 2023 | Team Udayavani |

ಭೋಪಾಲ್: ಬೈಕ್‌ ನಲ್ಲಿ ಚಲಿಸುತ್ತಿರುವ ವೇಳೆ ಹಾವು ಕಡಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮೋವ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೃತ ವ್ಯಕ್ತಿಯನ್ನು ಮನೀಶ್‌ ಎಂದು ಗುರುತಿಸಲಾಗಿದೆ.

ಮನೀಶ್ ಅವರು ಮನೆ ಅಥವಾ ಊರಿನಲ್ಲಿ ಕಾಣಿಸಿಕೊಳ್ಳುವ ಹಾವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುತ್ತಿದ್ದರು. ಇತ್ತೀಚೆಗೆ ತೇಲಿ ಖೇಡಾ ಗ್ರಾಮದ ದನದ ಕೊಟ್ಟಿಗೆಗೆ ಹಾವೊಂದು ನುಗ್ಗಿರುವ ಬಗ್ಗೆ ಮನೀಶ್‌ಗೆ ಮಾಹಿತಿ ಅವರಿಗೆ ಹೇಳಲಾಗಿತ್ತು. ಕೂಡಲೇ ಮನೀಶ್‌ ತನ್ನ ಸ್ನೇಹಿತನೊಂದಿಗೆ ಗ್ರಾಮಕ್ಕೆ ತೆರಳಿ ಹಾವನ್ನು ಹಿಡಿದಿದ್ದಾರೆ.

ಇದಾದ ಬಳಿಕ ಹಾವನ್ನು ಕಾಡಿಗೆ ಬಿಡಲು ಮನೀಶ್‌ ಹಾಗೂ ಆತನ ಸ್ನೇಹಿತ ತೆರಳಿದ್ದಾರೆ. ಬೈಕ್‌ನ ಹಿಂಬದಿಯಲ್ಲಿ ಕೂತಿದ್ದ ಮನೀಶ್‌ ಅವರು ಹಾವನ್ನು ಕೈಯಲ್ಲಿ ಹಿಡಿಕೊಂಡಿದ್ದಾರೆ. ಬೈಕ್‌ ನಲ್ಲಿ ಹೋಗುವ ವೇಳೆ ಹಾವು ಮನೀಶ್‌ ಅವರ ಕೈಗೆ ಕಚ್ಚಿದೆ. ಕೂಡಲೇ ಮನೀಶ್‌ ಬೈಕ್‌ ನಿಲ್ಲಿಸುವಂತೆ ಹೇಳಿದ್ದಾರೆ. ಬೈಕ್‌ ನಿಲ್ಲಿಸಿದ ಕ್ಷಣಮಾತ್ರದಲ್ಲಿ ಮನೀಶ್‌ ದಿಢೀರ್‌ ಕುಸಿದು ಬಿದ್ದಿದ್ದಾರೆ.

ಹಾವಿನ ವಿಷ ದೇಹದೊಳಗೆ ಹೋಗಿದೆ. ಮನೀಶ್‌ ಒಮ್ಮೆ ಎದ್ದು ನಿಲ್ಲಲು ಯತ್ನಿಸಿದ್ದಾರೆ ಆದರೆ ಏಳುವ ವೇಳೆ ಮತ್ತೆ ಕುಸಿದು ಬಿದ್ದು ಅಲ್ಲೇ ಪ್ರಾಣ ಬಿಟ್ಟಿದ್ದಾರೆ.

Advertisement

ಸದ್ಯ ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್‌ ಆಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next