Advertisement

ಸಾಲ ವಾಪಸ್‌ ಕೇಳಲು ಹೋದವನಿಗೆ ಮದ್ಯ ಕುಡಿಸಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಮಹಿಳೆಯರು!

03:24 PM Apr 24, 2022 | Team Udayavani |

ಹಾಸನ: ಸಾಲ ಕೊಟ್ಟಿದ್ದ ವ್ಯಕ್ತಿ ಸಾಲದ ಹಣವನ್ನು ವಾಪಸ್‌ ಕೊಡುವಂತೆ ಕೇಳಿದಾಗ ಕಂಠ ಪೂರ್ತಿ ಮದ್ಯ ಕುಡಿಸಿ , ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಪ್ರಕರಣ ಹೊಳೆನರಸೀಪುರ ತಾಲೂಕು ಪರಸನಹಳ್ಳಿಯಲ್ಲಿ ನಡೆದಿದೆ.

Advertisement

ಪರಸನಹಳ್ಳಿ ಗ್ರಾಮದ ನಂಜೇಗೌಡ ಎಂಬವರು ತಮ್ಮ ಪಕ್ಕದ ಬಂಡಿಹಳ್ಳಿ ಗ್ರಾಮದ ಶಿವಶಂಕರ ಅವರಿಗೆ ಮನೆ ಕಟ್ಟಲು 1.43 ಲಕ್ಷ ರೂ. ಸಾಲ ಕೊಟ್ಟಿದ್ದರು. ಸಾಲವನ್ನು ವಾಪಸ್‌ ಕೊಡುವಂತೆ ಗುರುವಾರ ನಂಜೇಗೌಡ ಅವರು ಶಿವಶಂಕರ ಅವರ ಮನೆಯ ಹತ್ತಿರ ಹೋಗಿದ್ದರು. ಶಿವಶಂಕರ ಅವರ ತಾಯಿ ಭಾಗ್ಯಮ್ಮ ಮತ್ತು ಅವರ ಹೆಂಡತಿ ರೇಣುಕಾ ಎಂಬವರು ಹಣ ಕೊಡುತ್ತೇವೆ ಎಂದು ಉಪಾಯದಿಂದ ಮನೆ ಒಳಗೆ ಕರೆದು ಬಾಗಿಲು ಹಾಕಿಕೊಂಡು ಬಲವಂತವಾಗಿ ಮದ್ಯ ಕುಡಿಸಿ ಆನಂತರ ದೊಣ್ಣೆಯಿಂದ ಹೊಡೆದಿದ್ದಾರೆ.

ನಂಜೇಗೌಡರವರು ಮನೆಗೆ ಬರದೆ ಇದ್ದಾಗ ಅವರ ಮಗ ಗಂಗಾಧರ ಮತ್ತು ಕಲ್ಲೇನಹಳ್ಳಿ ಸುನಿಲ್‌ ಎಂಬುವರು ಶಿವಶಂಕರ ಅವರ ಮನೆಯ ಹತ್ತಿರ ಬಂದಾಗ ನಂಜೇಗೌಡ ಅವರು ರಕ್ತಸ್ರಾವದಿಂದ ಬಿದ್ದು ಒದ್ದಾಡುತ್ತಿದ್ದರು. ಅವರನ್ನು ಸುಧಾರಿಸಿ ಕೇಳಿದಾಗ ಸುಸ್ತಾಗಿದ್ದ ನಂಜೇಗೌಡ ಅವರು ಸಾಲದ ಹಣ ಕೇಳಿದ್ದಕ್ಕೆ ಶಿವಶಂಕರನ ಮನೆಯವರು ಈ ರೀತಿ ಮಾಡಿದ್ದಾರೆ ಎಂದು ಹೇಳಿ ಜೀವ ಬಿಟ್ಟರು ಎಂದು ಶಾಂತಿಗ್ರಾಮ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next