Advertisement

ಮಣಿಪುರ ಸೇತುವೆ ಬಳಿ ಹೊಳೆಗೆ ಹಾರಿ ವ್ಯಕ್ತಿ ನಾಪತ್ತೆ

03:40 AM Jul 03, 2017 | Team Udayavani |

ಕಾಪು: ಮಣಿಪುರ ಸೇತುವೆ ಬಳಿ ಕಾರೊಂದನ್ನು ನಿಲ್ಲಿಸಿ ಉಡುಪಿಯ ವಾದಿರಾಜ ರಸ್ತೆ ನಿವಾಸಿ ಪ್ರಕಾಶ್‌ ಪೈ (58) ಅವರು ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪ್ರಕಾಶ್‌ ಪೈ ಅವರ ಮಾರುತಿ ಕಾರು, ಮೊಬೈಲ್‌, ವಾಚ್‌ ಹಾಗೂ ಡೆತ್‌ನೋಟ್‌ ಕಾರಿನ ಸೀಟಿನಲ್ಲಿ ಪತ್ತೆಯಾಗಿವೆ. ಶನಿವಾರದಿಂದ ಅವರು ವಿಪರೀತ ತಲೆನೋವು ಎಂದು ಹೇಳುತ್ತಿದ್ದು, ಡೆತ್‌ನೋಟ್‌ನಲ್ಲಿರುವ ಹಸ್ತಾಕ್ಷರ ಪ್ರಕಾಶ್‌ ಪೈ ಅವರದ್ದೇ ಎಂದು ಅವರ ಪತ್ನಿ ದೃಢೀಕರಿಸಿದ್ದಾರೆ.

Advertisement

ಉಡುಪಿಯಿಂದ ಅಗ್ನಿಶಾಮಕ ದಳ, ಸ್ಥಳೀಯ ಈಜುಗಾರರು ಆಗಮಿಸಿ ಹೊಳೆಯಲ್ಲಿ ದೇಹದ ಪತ್ತೆಗೆ ಶ್ರಮಿಸಿದ್ದು ರಾತ್ರಿಯವರೆಗೂ ಪ್ರಕಾಶ್‌ ಪೈ ಅವರ ಪತ್ತೆಯಾಗಿಲ್ಲ. ಮಣಿಪುರ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಚಾಲಕರು ಕಾರು ನಿಲ್ಲಿಸಿರುವುದನ್ನು ಗಮನಿಸಿದ್ದಾರೆ. ಮಧ್ಯಾಹ್ನದ ಬಳಿಕ ಹೊಳೆಗೆ ಹಾರಿರುವುದನ್ನು ಮೀನು ಹಿಡಿಯುವ ಮಂದಿ ನೋಡಿರುವುದಾಗಿ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಪ್ರಕಾಶ್‌ ಪೈ ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಎಂದು ತಿಳಿದುಬಂದಿದೆ. ವಿಪರೀತ ತಲೆನೋವಿನಿಂದ ಮನನೊಂದು ತಾನು ಆತ್ಮಹತ್ಯೆಯನ್ನು ಎಸಗುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆಯಲಾಗಿದೆ. ಕಾಪು ಠಾಣಾಧಿಕಾರಿ ಜಗದೀಶ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next