Advertisement

Kudgi-NTPC: ಹಾರುಬೂದಿ ಟ್ಯಾಂಕರ್‌ ಗೆ ವಿದ್ಯುತ್ ಮೇನ್ ಲೈನ್ ತಾಗಿ ವ್ಯಕ್ತಿ ಸಾವು

08:27 PM Jun 08, 2024 | Suhan S |

ಕೊಲ್ಹಾರ (ವಿಜಯಪುರ) : ತಾಲೂಕಿನ ಕೂಡಗಿ ಎನ್.ಟಿ.ಪಿ.ಸಿ.‌ ಘಟಕದ ಹಾರುಬೂದಿ ಸಾಗಿಸಲು ಬಂದಿದ್ದ ಬಲ್ಕರ್ ವಾಹನದ  ಚಾಲಕ ವಿದ್ಯುತ್ ಮೇನ್ ಲೈನ್ ತಾಗಿ ಮೃತಪಟ್ಟಿರುವ ಘಟನೆ ಉಷ್ಣ ವಿದ್ಯುತ್ ಸ್ಥಾವರದ ಬಳಿಯ ಎಚ್ ಪಿ  ಪೆಟ್ರೋಲ್ ಪಂಪ್ ಹತ್ತಿರ  ಶನಿವಾರ ಸಂಜೆ 5 ಗಂಟೆಯ ಸುಮಾರಿಗೆ ಜರುಗಿದೆ.

Advertisement

ಮೃತ ಚಾಲಕ ವಿಶ್ವನಾಥ್ ಶೇವು ರಾಠೋಡ (24) ಸಿಂದಗಿ ತಾಲೂಕಿನ ಕೋರವಾರ ಸಮೀಪದ ಮಲ್ಲಾಳ ತಾಂಡಾ ಎಲ್ ಟಿ ಗ್ರಾಮದವನು ಎಂದು ತಿಳಿದು ಬಂದಿದೆ. ಚಾಲಕ ವಾಹನದ ಮೇಲೆ ಹತ್ತಿದ ಸಂದರ್ಭದಲ್ಲಿ ಮೇನ್ ಲೈನ್ ತಾಗಿದೆ. ಸ್ಥಳಕ್ಕೆ ಕೂಡಗಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next