Advertisement

ಮಾಜಿ ಪ್ರೇಯಸಿ ಬಳಿ ಹೋದ ವಿವಾಹಿತ ಮಸಣ ಸೇರಿದ : ಆ ಮಧ್ಯರಾತ್ರಿ ನಡೆದಿದ್ದೇನು ?

08:25 PM Feb 27, 2021 | Team Udayavani |

ಗುಜರಾತ್ : ಮಧ್ಯರಾತ್ರಿ ಮಾಜಿ ಪ್ರೇಯಸಿ ಭೇಟಿಗೆ ಹೋದ ವಿವಾಹಿತನೋರ್ವ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ರಾಜಕೋಟ್ ನಲ್ಲಿ ನಡೆದಿದೆ. ಉಜೈನ್ ಸಿಂಗ್ ಗೌತಮ್ ಪ್ರಾಣ ಕಳೆದುಕೊಂಡ ವ್ಯಕ್ತಿ.

Advertisement

28 ವರ್ಷದ ಗೌತಮ್‍ನಿಗೆ ಮದುವೆಯಾಗಿ ಎರಡು ಮಕ್ಕಳು ಇದ್ದರು. ಚೆಂದದ ಪತ್ನಿಯಿದ್ದರೂ ಕೂಡ ಈತ ಮದುವೆ ಮುಂಚಿನ ತನ್ನ ‘ಅಫೇರ್’ ನಿಂದ ಹೊರ ಬಂದಿರಲಿಲ್ಲ. ಕದ್ದು ಮುಚ್ಚಿ ಹಳೆಯ ಗೆಳತಿ ಜತೆ ಸಂಬಂಧ ಮುಂದುವರೆಸಿದ್ದ.

ಫೆ.20 ರಂದು ಗೌತಮ್ ಪತ್ನಿ ಹಾಗೂ ಮಕ್ಕಳು ಸಂಬಂಧಿಕರ ಮದುವೆಗೆಂದು ಊರಿಗೆ ತೆರಳಿದ್ದರು. ಅಂದು ರಾತ್ರಿ ಗೌತಮ್ ಮಾಜಿ ಪ್ರೇಯಸಿ ಮನೆಗೆ ತೆರಳಿ ರೂಂ ಸೇರಿದ್ದ. ಗದ್ದಲದಿಂದಾಗಿ ಎಚ್ಚರಗೊಂಡ ಅವಳ ಸಹೋದರ ಲೈಟ್ ಆನ್ ಮಾಡಿದ್ದ. ಇದರಿಂದ ಸಿಕ್ಕಿ ಬೀಳುವ ಭಯದಲ್ಲಿ ಗೌತಮ್ ಕತ್ತಲಿನಲ್ಲಿ ಓಡಲು ಶುರುಮಾಡಿದ. ಆತನ ನೆರಳು ಗುರುತಿಸಿದ ಪ್ರೇಯಸಿಯ ಸಹೋದರ ಗೌತಮ್ ಬೆನ್ನು ಹತ್ತಿದ. ಗಾಬರಿಯಲ್ಲಿದ್ದ ಗೌತಮ್ ನೆಲಬಾವಿ (ತಡೆಗೋಡೆ ಇರದ ಬಾವಿ) ಗಮನಿಸದೆ ಅದರಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ :ಹೊನ್ನಾವರದ ಪರೇಶ್ ಮೇಸ್ತ ಸಾವಿನ ಹಿಂದೆ ಬಿಜೆಪಿಯವರೇ ಭಾಗಿ : ಡಿಕೆಶಿ ಅನುಮಾನ

ಇನ್ನು ಮದುವೆ ಮುಗಿಸಿಕೊಂಡು ಮನೆಗೆ ಮರಳಿದ ಗೌತಮ್ ಪತ್ನಿ, ಪತಿಯ ಹುಡುಕಾಟ ನಡೆಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾರನೇ ದಿನ ಮಾಜಿ ಸ್ನೇಹಿತೆಯ ಮನೆ ಸಮೀಪ ಗೌತಮ್ ಬೈಕ್ ಸಿಕ್ಕಿತ್ತು. ಅದೇ ದಿನ ಬಾವಿಯಲ್ಲಿ ಆತನ ಮೃತದೇಹ ಕೂಡ ಪತ್ತೆಯಾಗಿತ್ತು. ವಿಚಾರಣೆ ವೇಳೆ ಗೌತಮ್ ತನ್ನ ಭೇಟಿಯಾಗಲು ಬಂದಿದ್ದ ವಿಚಾರವನ್ನು ಆತನ ಮಾಜಿ ಪ್ರೇಯಸಿ ಪೊಲೀಸರಿಗೆ ತಿಳಿಸಿದ್ದಾಳೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next