Advertisement

ಚಿತ್ರದುರ್ಗ: ಪತ್ನಿಗೆ ಕೋವಿಡ್ ಪಾಸಿಟಿವ್; ಹೆದರಿದ ಗಂಡ ನೇಣಿಗೆ ಶರಣು!

10:41 AM May 29, 2021 | Team Udayavani |

ಚಿತ್ರದುರ್ಗ: ಪತ್ನಿಯ ಕೋವಿಡ್ ವರದಿ ಪಾಸಿಟಿವ್ ಬಂದ ಕಾರಣ ಹೆದರಿದ ಗಂಡ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.

Advertisement

ರಂಗನಾಥಪುರ ನಿವಾಸಿ ರಾಜು (32 ವ) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಈತನ ಪತ್ನಿ ರಶ್ಮಿಗೆ ಇದೇ ತಿಂಗಳು 27 ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಆದರೆ ರಾಜು ವರದಿ ನೆಗೆಟಿವ್ ಆಗಿತ್ತು.

ಇದನ್ನೂ ಓದಿ:ಹಸೆಮಣೆಯಲ್ಲೇ ಕುಸಿದು ಬಿದ್ದು ವಧು ಸಾವು, ಬಳಿಕ ವಧುವಿನ ಸಹೋದರಿ ಜತೆ ವರನ ವಿವಾಹ!

ಮೇ.27ರಂದೇ ಸಂಜೆ ರಶ್ನಿ ಅವರನ್ನು ದೇವರಕೊಟ್ಟ ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಗಿತ್ತು.ಇದರಿಂದ ಗಾಬರಿಗೊಂಡು ಪತಿ ರಾಜು ಜಮೀನಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಿರಿಯೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next