Advertisement

Sullia ಆಟೋ ರಿಕ್ಷಾದಲ್ಲಿ ವ್ಯಕ್ತಿ ಸಾವು

11:12 PM Sep 22, 2023 | Team Udayavani |

ಸುಳ್ಯ: ಅಸೌಖ್ಯದಿಂದಿದ್ದ ಚೆಂಬು ಗ್ರಾಮ ಅನ್ಯಾಳದ ವ್ಯಕ್ತಿಯೊಬ್ಬರು ಆಟೋ ರಿಕ್ಷಾದಲ್ಲಿ ಪಂಜ ಸಮೀಪದ ಕರಿಕ್ಕಳಕ್ಕೆ ಹೋಗಿ ವಾಪಸಾಗುತ್ತಿದ್ದಾಗ ರಿಕ್ಷಾದಲ್ಲೆ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.

Advertisement

ಮಡಿಕೇರಿಯ ಚೆಂಬು ಸಮೀಪದ ಅನ್ಯಾಳದ ಚಂದ್ರಶೇಖರ ಅವರು ಅಸೌಖ್ಯದಿಂದಿದ್ದರು. ಅವರು ಔಷಧಿಗೆಂದು ಕರಿಕ್ಕಳಕ್ಕೆ ಆಟೋದಲ್ಲಿ ಹೋಗಿ ವಾಪಸಾಗುತ್ತಿದ್ದಾಗ ನಿಂತಿಕಲ್ಲು ಸಮೀಪ ಅವರು ಅಸ್ವಸ್ಥಗೊಂಡು ರಿಕ್ಷಾದಲ್ಲೆ ಕುಸಿದು ಬಿದ್ದಿದ್ದಾರೆ. ತತ್‌ಕ್ಷಣ ಕ್ಲಿನಿಕ್‌ಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next