Advertisement

ಚಿಕ್ಕಮಗಳೂರು: ಹೊಳೆದಾಟುವ ಸಂದರ್ಭ ಕಾಲು ಜಾರಿ ಹೊಳೆಗೆ ಬಿದ್ದು ಸಾವು

09:18 AM Aug 11, 2019 | keerthan |

ಚಿಕ್ಕಮಗಳೂರು : ಇಲ್ಲಿನ ಗೌತಮೇಶ್ವರ ದೇವಸ್ಥಾನದ ಬಳಿ ಹೊಳೆದಾಟುವ ಸಂದರ್ಭ ಕಾಲು ಜಾರಿ ಹೊಳೆಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.

Advertisement

ಕೂದುವಳ್ಳಿ ಚಂದ್ರೆಗೌಡ ಮೃತಪಟ್ಟ ವ್ಯಕ್ತಿ . ಗೌತಮೇಶ್ವರ ದೇವಸ್ಥಾನದ ಬಳಿ ರಭಸವಾಗಿ ಹರಿಯುತ್ತಿದ್ದ ಕಟ್ಟೆಹೋಳೆ ಹಳ್ಳ ದಾಟಲು ಹೋದಾಗ ಕಾಲು ಜಾರಿ ಬಿದ್ದು ಮೃತರಾಗಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ಬಲವಾದ ಪೆಟ್ಟು ಬಿದ್ದು ಹಳ್ಳದಲ್ಲೇ ಕೊಚ್ಚಿ ಹೋಗಿದ್ದಾರೆ.

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆ, ಹಳ್ಳವಳ್ಳಿ- ಹೋರನಾಡು ರಸ್ತೆ,ಸುಂಕಶಾಲೆ ರಸ್ತೆ, ಕೊಟ್ಟಿಗೆಹಾರ – ಕಳಸ ರಸ್ತೆ, ತತ್ಕೋಳ – ಕುಂದೂರು ರಸ್ತೆ, ದುರ್ಗದ ಹಳ್ಳಿ, ಚನ್ನಹಡ್ಲು,ಹಿರೇಬೈಲು ಮಲ್ಲೇಶ್ವರ ರಸ್ತೆ ತಾತ್ಕಾಲಿಕ ಕಡಿತವಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಭಾರಿ ಮಳೆಯಿಂದ 125 ಹೆಚ್ಚು ಜನರಿಗೆ ತೊಂದರೆಯಾಗಿದ್ದು, ರಕ್ಷಣೆ ಕೋರಿ ಸರ್ಕಾರಕ್ಕೆ ಜಿಲ್ಲಾಡಳಿತ ಮನವಿ ಸಲ್ಲಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next