Advertisement

ಜಯ ಪುತ್ರ ಎಂದವನ ಜೈಲಿಗಟ್ಟಲು ಆದೇಶ

09:15 AM Mar 28, 2017 | Team Udayavani |

ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮತ್ತು ತಮಿಳು ನಟ ಶೋಬನ್‌ ಬಾಬು ಪುತ್ರ ತಾನು ಎಂದು ಹೇಳಿಕೊಂಡಿದ್ದ ಜೆ.ಕೃಷ್ಣಮೂರ್ತಿ ಎಂಬಾತನ ಬಂಧನಕ್ಕೆ ಮದ್ರಾಸ್‌ ಹೈಕೋರ್ಟು ಸೋಮವಾರ ಆದೇಶ ನೀಡಿದೆ. ಪೊಯೆಸ್‌ ಗಾರ್ಡನ್‌ ಸೇರಿ ಜಯಲಲಿತಾರ ಎಲ್ಲ ಆಸ್ತಿ ತನಗೇ ಸೇರಬೇಕು. ಈ ಬಗ್ಗೆ ಆದೇಶ ನೀಡಲು ಕೋರಿ ಈತ ದಾಖಲೆಗಳನ್ನು ಸಲ್ಲಿಸಿದ್ದ. ಅದನ್ನು ಪರಿಶೀಲಿಸುವಂತೆ ಚೆನ್ನೈ ಪೊಲೀಸ್‌ ಆಯುಕ್ತರಿಗೆ ನ್ಯಾ.ಆರ್‌.ಮಹದೇವನ್‌ ನೇತೃತ್ವದ ಪೀಠ ಆದೇಶಿಸಿತ್ತು. ಅವರು ದಾಖಲೆಗಳೆಲ್ಲ ನಕಲಿ ಎಂದು ವರದಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಕೃಷ್ಣಮೂರ್ತಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾನೆ. ಜತೆಗೆ ನ್ಯಾಯಾಲಯಕ್ಕೆ ವಂಚನೆ ಮಾಡಲು ಯತ್ನಿಸಿದ್ದಾನೆ. ಹೀಗಾಗಿ ಆತನನ್ನು ಕೂಡಲೇ ಬಂಧಿಸಲು ನ್ಯಾ.ಮಹದೇವನ್‌ ಆದೇಶಿಸಿ, ಮುಂದಿನ ವಿಚಾರಣೆಯನ್ನು ಏ.17ಕ್ಕೆ ನಿಗದಿಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next