Advertisement

ಜಾರ್ಖಂಡ್: ಕುಡಿದ ಅಮಲಿನಲ್ಲಿ ಹಲ್ಲೆಗೈದು, 12ನೇ ಪತ್ನಿಯನ್ನು ಸಾಯಿಸಿದ ಪತಿ

12:36 PM Apr 04, 2023 | Team Udayavani |

ಜಾರ್ಖಂಡ್: ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನು ಹೊಡೆದು ಸಾಯಿಸಿರುವ ಘಟನೆ ಜಾರ್ಖಂಡ್‌ ನ ಗಿರಿದಿಹ್ ಜಿಲ್ಲೆಯ ತಾರಾಪುರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ರಾಮಚಂದ್ರ ತುರಿ ಈ ಹಿಂದೆ 11 ಮಹಿಳೆಯನ್ನು ಮದುವೆಯಾಗಿದ್ದು, 12 ನೇ ಪತ್ನಿಯನ್ನಾಗಿ ಸಾವಿತ್ರಿ ದೇವಿ ಅವರನ್ನು ವರಿಸಿದ್ದ. ಈ ದಂಪತಿಗೆ ಮೂರು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ.

ಭಾನುವಾರ ( ಏ. 2 ರಂದು) ಕುಡಿದು ಮನೆಗೆ ಬಂದಿದ್ದ ರಾಮಚಂದ್ರ ತುರಿ ಪತ್ನಿ ಸಾವಿತ್ರಿಯೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಪತಿ ಕೋಲಿನಿಂದ ಹೊಡೆದು ಸಾಯಿಸಿದ್ದಾನೆ.

ಇದನ್ನೂ ಓದಿ: ಕೆಕೆಆರ್ ಗೆ ಆಘಾತ: ಐಪಿಎಲ್ ನಿಂದ ಹಿಂದೆ ಸರಿದ ಪ್ರಮುಖ ಆಲ್ ರೌಂಡರ್

ಸೋಮವಾರ ಈ ಘಟನೆ ಬೆಳಕಿಗೆ ಬಂದಿದ್ದು,ಗವಾನ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ರಾಮಚಂದ್ರ ತುರಿ 11 ಮಹಿಳೆಯರನ್ನು ವಿವಾಹವಾಗಿದ್ದು, ಈತನ ದೈಹಿಕ ಹಿಂಸೆಯನ್ನು ತಾಳಲಾರದೇ ಅವರು ಆತನಿಂದ ದೂರವಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next