Advertisement

ಅಸ್ಸಾಂ: ಮಹಿಳೆಯನ್ನು ಕೊಂದ ಆರೋಪದಲ್ಲಿ ವ್ಯಕ್ತಿಯ ಸಜೀವ ದಹನ

03:50 PM Jul 10, 2022 | Team Udayavani |

ಗುವಾಹಟಿ: ಮಹಿಳೆಯೊಬ್ಬರನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಸಜೀವ ದಹನ ಮಾಡಲು ಅಸ್ಸಾಂನ ನಾಗಾಂವ್ ಜಿಲ್ಲೆಯ ಗ್ರಾಮ ಕಾಂಗರೂ ನ್ಯಾಯಾಲಯದಲ್ಲಿ ತೀರ್ಪು ನೀಡಿರುವ ಬಗ್ಗೆ ಭಾನುವಾರ ಪೊಲೀಸರು ತಿಳಿಸಿದ್ದಾರೆ.

Advertisement

35ರ ಹರೆಯದ ರಂಜಿತ್ ಬೊರ್ಡೊಲೊಯ್ ಎಂಬಾತನನ್ನು ಸುಟ್ಟು ಹಾಕಿದ್ದಕ್ಕಾಗಿ ಮೂವರು ಮಹಿಳೆಯರು ಸೇರಿದಂತೆ ಐವರನ್ನು ಪೊಲೀಸರು ಇಲ್ಲಿಯವರೆಗೆ ಬಂಧಿಸಿದ್ದಾರೆ ಎಂದು ಎಸ್ಪಿ ಲೀನಾ ಡೋಲಿ ತಿಳಿಸಿದ್ದಾರೆ.

ಶನಿವಾರ ರಾತ್ರಿ ಸಮಗುರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೋರ್ಲಾಲುಂಗಾವ್ ಮತ್ತು ಬರ್ಹಾಂಪುರ ಬಾಮುನಿಯಲ್ಲಿ ಈ ಘಟನೆ ನಡೆದಿದೆ.

ಕೆಲವು ದಿನಗಳ ಹಿಂದೆ ಕೊಳದಲ್ಲಿ ಶವವಾಗಿ ಪತ್ತೆಯಾದ 22 ರ ಹರೆಯದ ಮಹಿಳೆಯ ಸಾವಿನ ಕುರಿತು ‘ರೈಜ್ ಮೆಲ್’ (ಸಾರ್ವಜನಿಕ ವಿಚಾರಣೆ) ನಡೆಸಲಾಯಿತು. ಬೋರ್ಡೊಲೋಯ್ ಸೇರಿದಂತೆ ಐವರು ಮಹಿಳೆಯನ್ನು ಕೊಲ್ಲುವುದನ್ನು ಮಹಿಳೆ ನೋಡಿದ್ದಾಳೆ ಎಂದು ಅವರು ಹೇಳಿದ್ದು, ಗ್ರಾಮಸ್ಥರು ಆರೋಪಿ ಎನ್ನಲಾದ ವ್ಯಕ್ತಿಯನ್ನು ಮನೆಯಿಂದ ಹೊರಗೆಳೆದು ಮರಕ್ಕೆ ಕಟ್ಟಿಹಾಕಿ ಗ್ರಾಮಸಭೆಯ ವಿಚಾರಣೆ ನಡೆಸಿದರು. ನಂತರ ಆತನನ್ನು ಥಳಿಸಿ ಸಜೀವ ದಹನ ಮಾಡಲಾಯಿತು. ಬಳಿಕ ಸುಟ್ಟ ದೇಹವನ್ನು ಹೂತು ಹಾಕಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

“ವಾಮಾಚಾರ ಮಾಡುವ ಮೂಲಕ ಮಹಿಳೆಯನ್ನು ಕೊಂದಿರುವುದಾಗಿ ಬೊರ್ಡೊಲೊಯ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಆದ್ದರಿಂದ, ಅವರು ಅವನಿಗೆ ಅದೇ ಶಿಕ್ಷೆಯನ್ನು ನೀಡಲು ನಿರ್ಧರಿಸಿದ್ದಾರೆ” ಎಂದು ಅಧಿಕಾರಿ ಹೇಳಿದರು.

Advertisement

ಹೊರತೆಗೆದಿರುವ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ. ನಾವು ನಿನ್ನೆ ರಾತ್ರಿ ಸ್ಥಳಕ್ಕೆ ತಲುಪಿದಾಗ, ಗ್ರಾಮದ ಹೆಚ್ಚಿನ ಪುರುಷರು ಓಡಿಹೋಗಿದ್ದರು. ‘ಗಾಂಬುರ್ಹಾ’ (ಗ್ರಾಮದ ಮುಖ್ಯಸ್ಥ) ನಮಗೆ ‘ಗ್ರಾಮ ಸಭೆ’ ಮತ್ತು ನಂತರದ ಕೊಲೆಯ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು. ಶಾಂತಿ ಕಾಪಾಡಲು ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗರೂ ನ್ಯಾಯಾಲಯವೆಂದರೆ ವಿಶೇಷವಾಗಿ ಸರಿಯಾದ ಪುರಾವೆಗಳಿಲ್ಲದೆ, ಅಪರಾಧ ಅಥವಾ ದುಷ್ಕೃತ್ಯದ ತಪ್ಪಿತಸ್ಥರೆಂದು ಪರಿಗಣಿಸುವ ಸಲುವಾಗಿ ಜನರ ಗುಂಪು ನಡೆಸಿದ ಅನಧಿಕೃತ ನ್ಯಾಯಾಲಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next