Advertisement

ಪತ್ನಿಯ ಕೊಂದಿದ್ದ ಆರೋಪಿ ತಮಿಳುನಾಡಲ್ಲಿ ಸೆರೆ

01:23 AM Jul 16, 2019 | Team Udayavani |

ಬೆಂಗಳೂರು: ಪತ್ನಿ ಮೇಲೆ ಅನುಮಾನಗೊಂಡು ಆಕೆ ಮಲಗಿದ್ದಾಗ ಖಾಲಿ ಸಿಲಿಂಡರ್‌ನಿಂದ ಹೊಡೆದು ಹತ್ಯೆಗೈದು ತಮಿಳುನಾಡಿನ ಧರ್ಮಪುರಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಮೈಕೋ ಲೇಔಟ್‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಮೈಕೋಲೇಔಟ್‌ನ ಬಿಳೇಕಳ್ಳಿ ನಿವಾಸಿ ಚಿನ್ನಸ್ವಾಮಿ (40) ಬಂಧಿತ. ಜು.12 ರ ತಡರಾತ್ರಿ ಆರೋಪಿ, ಪತ್ನಿ ಉಮಾರಾಣಿ (30)ಯನ್ನು ಖಾಲಿ ಸಿಲಿಂಡರ್‌ನಿಂದ ಮೂರು ಬಾರಿ ಹೊಡೆದು ಹತ್ಯೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

ತಮಿಳುನಾಡಿನ ಧರ್ಮಪುರಿ ಮೂಲದ ಚಿನ್ನಸ್ವಾಮಿ ಮತ್ತು ಉಮಾರಾಣಿ ದಂಪತಿ 15 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಬಿಳೇಕಳ್ಳಿಯಲ್ಲಿ ವಾಸವಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಉಮಾರಾಣಿ ಖಾಸಗಿ ಆಸ್ಪತ್ರೆಯಲ್ಲಿ ಹೌಸ್‌ಕೀಪಿಂಗ್‌ ಕೆಲಸಕ್ಕೆ ಹೋಗುತ್ತಿದ್ದರು. ಚಿನ್ನಸ್ವಾಮಿ ಗುಜುರಿ ವ್ಯಾಪಾರ ಮಾಡುತ್ತಿದ್ದ.

ಇತ್ತೀಚೆಗೆ ಪತ್ನಿ ಉಮಾರಾಣಿ ಮೇಲೆ ಅನುಮಾನಗೊಂಡಿದ್ದ ಆರೋಪಿ, ಆಕೆಯೊಂದಿಗೆ ನಿತ್ಯ ಜಗಳ ಆಡುತ್ತಿದ್ದ. ಅಲ್ಲದೆ, ಮದ್ಯ ಸೇವಿಸಿ ಆಕೆ ಮೇಲೆ ಹಲ್ಲೆ ಕೂಡ ನಡೆಸುತ್ತಿದ್ದ. ಶನಿವಾರ ರಾತ್ರಿ ದಂಪತಿ ನಡುವೆ ಇದೇ ವಿಚಾರಕ್ಕೆ ಜಗಳ ನಡೆದಿದ್ದು, ಕೆಲ ಹೊತ್ತಿನ ಬಳಿಕ ಪತ್ನಿ ಉಮಾರಾಣಿ ಮಲಗಿದ್ದಾರೆ.

ತಡರಾತ್ರಿ 2 ಗಂಟೆ ಸುಮಾರಿಗೆ ಆರೋಪಿ ಮನೆಯಲ್ಲಿದ್ದ ಖಾಲಿ ಸಿಲಿಂಡರ್‌ನಿಂದ ಪತ್ನಿಗೆ ಮೂರು ಬಾರಿ ಹೊಡೆದು ಹತ್ಯೆಗೈದಿದ್ದಾನೆ. ಅದನ್ನು ಕಂಡ ಮಕ್ಕಳು ಜೋರಾಗಿ ಕೂಗಲಾರಂಭಿಸಿದ್ದಾರೆ. ಹೆದರಿದ ಆರೋಪಿ ಬಾಗಿಲು ಹಾಕಿಕೊಂಡು ತಲೆಮರೆಸಿಕೊಂಡಿದ್ದ. ವಿಶೇಷ ಕಾರ್ಯಾಚರಣೆ ನಡೆಸಿದ ಮೈಕೋ ಲೇಔಟ್‌ ಪೊಲೀಸರು ಸೋಮವಾರ ತಮಿಳುನಾಡಿನ ಧರ್ಮಪುರಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next