Advertisement

ಮಮತಾ ಬ್ಯಾನರ್ಜಿ ಬಂಗಾಳದ ಹುಲಿ : ಚಂದ್ರ ಬಾಬು ನಾಯ್ಡು

09:50 AM May 10, 2019 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಬಂಗಾಳದ ಹುಲಿ’ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ,ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಬಣ್ಣಿಸಿದ್ದಾರೆ.

Advertisement

ಖರಗ್‌ಪುರ್‌ದಲ್ಲಿ ಟಿಎಂಸಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ನಾಯ್ಡು, ಮಮತಾ ಬಂಗಾಳದ ಹುಲಿ. ಇಂದು ಬಂಗಾಳ ಏನು ಯೋಚನೆ ಮಾಡುತ್ತದೋ ನಾಳೆ ದೇಶವೂ ಅದನ್ನೇ ಯೋಚಿಸುತ್ತದೆ ಎಂದರು.

ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಿಡಿದೆದ್ದು ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದು ಮಹಾಘಟಬಂಧನ್‌ನ ಭಾಗವಾಗಿದ್ದಾರೆ. ಕಾಂಗ್ರೆಸ್‌ , ಆಮ್‌ ಆದ್ಮಿ ಪಕ್ಷ, ಎಸ್‌,ಆರ್‌ಜೆಡಿ , ಜೆಡಿಎಸ್‌ ಸೇರಿ ಹಲವು ಪಕ್ಷಗಳ ಪ್ರಮುಖ ನಾಯಕರೊಂದಿಗೆ ಮಾತುಕತೆಗಳನ್ನೂ ನಡೆಸಿದ್ದಾರೆ. ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಬಿಜೆಪಿ ಸೋಲಿಸುವ ರಣತಂತ್ರ ಹಣೆಯಲು ಪ್ರಮುಖ ಪಕ್ಷಗಳ ನಾಯಕರ ಸಭೆಯನ್ನೂ ಕರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next