Advertisement

ದಿಲ್ಲಿ ಸಿಎಂ ಕೇಜ್ರಿವಾಲ್‌ ಹೆಜ್ಜೆ ತುಳಿದ ಧರಣಿ ನಿರತ ಮಮತಾ: ಬಿಜೆಪಿ

11:38 AM Feb 04, 2019 | udayavani editorial |

ಹೊಸದಿಲ್ಲಿ : ನಗರ ಪೊಲೀಸ್‌ ಕಮಿಷನರ್‌ ರನ್ನು ಬೆಂಬಲಿಸಿ ಆತನ ಸಂಗಡವೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧರಣಿ ಕುಳಿತಿರುವುದನ್ನು ಕೇಂದ್ರ ಕಾನೂನು ಸಚಿವ ರವಿ ಶಂಕರ್‌ ಪ್ರಸಾದ್‌ ಅವರು ಇಂದು ಸೋಮವಾರ ತೀವ್ರವಾಗಿ ಟೀಕಿಸಿದ್ದಾರೆ.

Advertisement

ರಾಜ್ಯದ ಮುಖ್ಯಮಂತ್ರಿಯಾಗಿ ಧರಣಿ ಕೂರುವ ಮೂಲಕ ಮಮತಾ ಬ್ಯಾನರ್ಜಿ ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಹಾದಿ ತುಳಿದಿದ್ದಾರೆ ಎಂದು ಸಚಿವ ಪ್ರಸಾದ್‌ ಟೀಕಿಸಿದರು. 

ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನಿಲುವನ್ನು ಕೂಡ ಸಚಿವ ಪ್ರಸಾದ್‌ ಖಂಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next