Advertisement

ಮಲ್ಪೆ: ನೀರಿಗೆ ಬಿದ್ದ ಮೀನುಗಾರನ ರಕ್ಷಣೆ

12:20 AM Oct 11, 2022 | Team Udayavani |

ಮಲ್ಪೆ: ಮಲ್ಪೆ ಮೀನುಗಾರಿಕಾ ಬಂದರಿನ ಪಶ್ಚಿಮ ದಿಕ್ಕಿನ ಜೆಟ್ಟಿ ಸಮೀಪ ನಿಲ್ಲಿಸಲಾಗಿದ್ದ ಬೋಟಿನಿಂದ ಕಾಲು ಜಾರಿ ಕೆಸರು ನೀರಿಗೆ ಬಿದ್ದ ಮೀನುಗಾರ ಒಡಿಶಾದ ಪ್ರಜ್ವಲ್‌ನನ್ನು ಮುಳುಗು ತಜ್ಞ ಈಶ್ವರ್‌ ಮಲ್ಪೆ ಅವರು ರಕ್ಷಿಸಿದ ಘಟನೆ ಸೋಮವಾರ ಸಂಜೆ ವೇಳೆ ನಡೆದಿದೆ.

Advertisement

ಆತ ಆಳಸಮುದ್ರ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದ.ಸೋಮವಾರ ಸಂಜೆ ಒಂದು ಬೋಟಿನಿಂದ ಇನ್ನೊಂದು ಬೋಟಿಗೆ ನಡೆದುಕೊಂಡು ಹೋಗುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ.

ದಕ್ಕೆಯಲ್ಲಿ ಕೆಸರು ತುಂಬಿಕೊಂಡಿದ್ದು, ಆತನ ಅರ್ಧ ದೇಹ ಕೆಸರಿನಲ್ಲಿ ಹೂತು ಹೋಗಿತ್ತು. ಆತ ಬೋಟಿನಲ್ಲಿ ನೇತು ಹಾಕಿದ್ದ ಟಯರನ್ನು ಹಿಡಿದುಕೊಂಡು ರಕ್ಷಣೆಗಾಗಿ ಕೂಗುತ್ತಿದ್ದ. ಅಲ್ಲೇ ಸಮೀಪದಲ್ಲಿದ್ದ ಈಶ್ವರ್‌ ಮಲ್ಪೆ ಅವರು ಧಾವಿಸಿ ಬಂದು ಹಗ್ಗದ ನೆರವಿನಿಂದ ಆತನನ್ನು ಮೆಲಕ್ಕೆತ್ತಿ ಪ್ರಾಣಪಾಯದಿಂದ ಕಾಪಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next