Advertisement

ದೇಶ ಮುಖ್ಯವೋ, ಧ್ವಜ‌ ಮುಖ್ಯವೋ : ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

07:35 PM Feb 19, 2022 | Team Udayavani |

ಬೆಂಗಳೂರು: ಒಬ್ಬ ಮಂತ್ರಿ ರಾಷ್ಟ್ರ ಧ್ವಜದ ಬಗ್ಗೆ ಈ ರೀತಿ ಮಾತನ್ನಾಡಿರುವುದು ಸರಿಯಲ್ಲ,ಆರ್‌ಎಸ್‌ಎಸ್ ಈ ರೀತಿಯ ಹೇಳಿಕೆ ಕೊಡುವಂತೆ ಮಾಡಿರಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

Advertisement

ಸಿದ್ದರಾಮಯ್ಯ ನೇತೃತ್ವ ಹಾಗೂ ಡಿ.ಕೆ ಶಿವಕುಮಾರ್ ಮಾರ್ಗದರ್ಶನದಲ್ಲಿ ಪಕ್ಷದ ಎಲ್ಲಾ ಶಾಸಕರು ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವ ಹೇಳಿಕೆ ನೀಡಿದ್ದಾರೆ. ರಾಜ್ಯ, ದೇಶದಲ್ಲಿ ಅವರ ಬಗ್ಗೆ ಕೆಟ್ಟದಾಗಿ ಮಾತನ್ನಾಡುತ್ತಿದ್ದಾರೆ. ಇದು ಹೊಸದೇನು ಅಲ್ಲ ಬಿಡಿ ಎಂದರು.

ತ್ರಿವರ್ಣ ಧ್ವಜವನ್ನ ಎಲ್ಲರೂ ಒಪ್ಪಿಕೊಂಡಿದ್ದಾರೆ. ಅಂತಹ ಧ್ವಜಕ್ಕೆ ಅವಮಾನ ಮಾಡಿವ ರೀತಿಯಲ್ಲಿ ಮಾತನ್ನಾಡಿದ್ದಾರೆ ನಮ್ಮ‌ ಪಕ್ಷದ ಎಲ್ಲರೂ ರಾಜೀನಾಮೆ ಕೇಳುತ್ತಿದ್ದಾರೆ. ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬಾಯಿ, ನಾಲಗೆ ಇದೆ ಅಂತಾ ಹೇಳಿ ಯುವಕರಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಬಾರದು ಎಂದರು.

ಹಿಜಾಬ್ ವಿವಾದ ನ್ಯಾಯಾಲಯದಲ್ಲಿ ಇದೆ, ವಕೀಲರು ವಾದ, ಪ್ರತಿವಾದ ಮಾಡುತ್ತಿದ್ದಾರೆ. ದೇಶ ಮುಖ್ಯವೋ ಧ್ವಜ‌ ಮುಖ್ಯವೋ ಎಂಬುದನ್ನ ತಿಳಿದುಕೊಳ್ಳಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next