Advertisement

ಮತ್ತೆ ಲೋಕಪಾಲ ಸಭೆಗೆ ಖರ್ಗೆ ಬಹಿಷ್ಕಾರ

12:30 AM Mar 16, 2019 | Team Udayavani |

ಹೊಸದಿಲ್ಲಿ: ಶುಕ್ರವಾರ ನಡೆದ ಲೋಕಪಾಲ ಆಯ್ಕೆ ಸಮಿತಿ ಸಭೆಯನ್ನು ಸತತ ಏಳನೇ ಬಾರಿಗೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಬಹಿಷ್ಕರಿಸಿದ್ದಾರೆ. ತಮ್ಮನ್ನು ಲೋಕಪಾಲ ಆಯ್ಕೆ ಸಮಿತಿಯ ವಿಶೇಷ ಆಹ್ವಾನಿತರಂತೆ ಪರಿಗಣಿಸಿರುವುದನ್ನು ಆಕ್ಷೇಪಿಸಿ ಖರ್ಗೆ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಅವರು, 2013ರ ಲೋಕಪಾಲ್‌ ಕಾಯ್ದೆಯ 4ನೇ ಕಲಂ ಪ್ರಕಾರ, ವಿಶೇಷ ಆಹ್ವಾನಿತರು ಆಯ್ಕೆ ಸಮಿತಿಯಲ್ಲಿರುವುದಕ್ಕೆ ಅಥವಾ ಸಮಿತಿಯ ಸಭೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ಅವಕಾಶವಿಲ್ಲ. ಹಾಗಾಗಿ ವಿಪಕ್ಷದ ನಾಯಕರಾದ ತಮ್ಮನ್ನು ಆಯ್ಕೆ ಸಮಿತಿಯ ಸದಸ್ಯರನ್ನಾಗಿ ಪರಿಗಣಿಸಬೇಕು. ಲೋಕಪಾಲ್‌ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ತಮ್ಮನ್ನು ವಿಪಕ್ಷಗಳ ನಾಯಕರೆಂದು ಪರಿಗಣಿಸಿ ಸಭೆಗೆ ಆಹ್ವಾನಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next