Advertisement

ನಿರುದ್ಯೋಗ ತೊಲಗಿಸಿ ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ: ಮಲ್ಲಿಕಾರ್ಜುನ ಚರಂತಿಮಠ

09:59 AM May 06, 2023 | Team Udayavani |

ಬಾಗಲಕೋಟೆ: ನಮ್ಮ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ. ವಿದ್ಯಾವಂತರು, ದುಡಿಯಲು ಬೇರೆಡೆ
ಹೋಗಬೇಕು. ಇಲ್ಲದಿದ್ದರೆ ಕೆಲಸವಿಲ್ಲದೇ ಇಲ್ಲಿಯೇ ಇರಬೇಕು. ಇಂತಹ ಪರಿಸ್ಥಿತಿ ತೊಲಗಿಸಿ, ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.

Advertisement

ನಗರದ ಹಳೆಯ ಐಬಿ ಹತ್ತಿರದ ಕೊಪ್ಪ ವಕೀಲರ ಮನೆಯಿಂದ ಪ್ರಚಾರ ಆರಂಭಿಸಿ ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿಯ ಪಣ ತೊಟ್ಟಿರುವ ಸ್ವಾಭಿಮಾನಿ ಕಾರ್ಯಕರ್ತರ ಆಟೋ ಚಿನ್ಹೆಗೆ ಮತದಾರರು ತಮ್ಮ ಮತ ನೀಡುವ ಮೂಲಕ ಹೊಸ ಬದಲಾವಣೆಗೆ ಅವಕಾಶ ನೀಡಬೇಕು. ಸಾಮಾನ್ಯ ಜನರ ಬದುಕು ಸದೃಢಗೊಂಡಾಗ ಮಾತ್ರ, ಆ ಕ್ಷೇತ್ರ ಸಮಗ್ರ ಅಭಿವೃದ್ಧಿ ಹೊಂದಿದೆ ಎನ್ನಬಹುದು. ಆದರೆ, ಸಂತ್ರಸ್ತರ ಕ್ಷೇತ್ರದಲ್ಲಿ ಸಾವಿರಾರು ಸಮಸ್ಯೆಗಳೊಂದಿಗೆ ಇಲ್ಲಿನ ಜನರು ಬದುಕುವಂತಾಗಿದೆ ಎಂದರು.

ಪ್ರತಿದಿನ ಸಾರ್ವಜನಿಕ ಕ್ಷೇತ್ರದಲ್ಲಿ ಇರುವಂತಹ ವ್ಯಕ್ತಿಗೆ ನಾನೇ ಎಲ್ಲ, ನಾನಿಲ್ಲದೇ ಏನು ಇಲ್ಲ ಎನ್ನುವ ದುರಹಂಕಾರ ಇರಬಾರದು. ಕಾರ್ಯಕರ್ತರು, ಜನ ಸಾಮಾನ್ಯರನ್ನು ಪ್ರೀತಿ-ಗೌರವದಿಂದ ಕಾಣಬೇಕು. ಈ ಬಾರಿ ಜನರು ಮತವೆಂಬ ಅಸ್ತದಿಂದ ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.

ಸ್ವಾಭಿಮಾನಿ ಕಾರ್ಯಕರ್ತರು ಕ್ಷೇತ್ರ ಅಭಿವೃದ್ಧಿಯ ಚಿಂತನೆ ಇಟ್ಟುಕೊಂಡಿದೆ. ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಕ್ಷೇತ್ರಕ್ಕೆ ತರುವ ಮೂಲಕ ಉದ್ಯೋಗ ಕಲ್ಪಿಸುವ ಮೂಲಕ ಯುವಕ-ಯುವತಿಯರಿಗೆ ಉದ್ಯೋಗ ಒದಗಿಸುಕೊಡುವ ನಿರ್ಧಾರ ಕೈಗೊಂಡಿದ್ದೇವೆ. ಇದಕ್ಕೆ ಕ್ಷೇತ್ರದ ಜನರ ಆಶೀರ್ವಾದ ಅಗತ್ಯ ಎಂದರು.

ಮನೆಗೆ ಜೆಸಿಬಿ ಪ್ರವೃತ್ತಿ ಬೇಡ: ಸಂತ್ರಸ್ತರಿಗೆ ಪರಿಹಾರ ಕೊಟ್ಟ ತಕ್ಷಣ ಅವರು ಬೇರೆ ಮನೆ ಕಟ್ಟಿಕೊಳ್ಳಲು ಆಗಲ್ಲ. ಆದರೆ, ಬಾಗಲಕೋಟೆಯಲ್ಲಿ ಪರಿಹಾರ ಕೊಟ್ಟ ತಕ್ಷಣ ಮನೆ ಕೆಡವಿ ಹಾಕುವ ಕೆಟ್ಟ ಪದ್ಧತಿ ಇದೆ. ಬಡವರ ಬಗ್ಗೆ ಮಾನವೀಯತೆಯೇ ಇಲ್ಲದಂತೆ ವರ್ತಿಸಲಾಗುತ್ತಿದೆ. ಇಂತಹ ವ್ಯಕ್ತಿಗಳನ್ನು ದೂರವಿಡಿ. ಈ ಬಾರಿ ಬಾಗಲಕೋಟೆಯ ಜನರು ಮತ ಹಾಕುವಲ್ಲಿ ಸ್ವಾಭಿಮಾನ ಹಾಗೂ ಪ್ರಜ್ಞಾವಂತಿಕೆ ತೋರಬೇಕು. ಇಲ್ಲದಿದ್ದರೆ ಇಲ್ಲಿ ಸಂತ್ರಸ್ತರು ಸಹಿತ
ಬಹುತೇಕರು ಐದು ವರ್ಷ ನೆಮ್ಮದಿಯಿಂದ ಬದುಕಲು ಸಾಧ್ಯವಾಗಲ್ಲ ಎಂದು ಹೇಳಿದರು.

Advertisement

ಹವೇಲಿಯಲ್ಲಿ ಬಿರುಸಿನ ಪ್ರಚಾರ: ಸ್ವಾಭಿಮಾನಿ ಬಳಗದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಅವರು ನಗರದ ಹವೇಲಿಯಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಹವೇಲಿಯ ಜನರು ನಿತ್ಯವೂ ದುಡಿದು ಬದುಕುವ
ಸ್ವಾಭಿಮಾನ ಜನ. ಈ ಜನರೊಂದಿಗೆ ನಾನು ಸದಾ ಇರುವೆ. ಕೊರೊನಾ ಸಂದರ್ಭದಲ್ಲಿ ಇಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ ಮಾಡಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ, ನಿಮ್ಮ ಕಷ್ಟಕ್ಕೆ ಸ್ಪಂದಿಸುವ, ಗೌರವಯುತವಾಗಿ ನಡೆದುಕೊಳ್ಳುವ ವ್ಯಕ್ತಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಹಿರಿಯ ವಕೀಲರಾದ ಎ.ಜಿ. ಕೊಪ್ಪ, ಮುಖಂಡರಾದ ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ರವಿ ಕುಮಟಗಿ, ಅಶೋಕ ಮುತ್ತಿನಮಠ, ಅಶೋಕ ಮಹೇಂದ್ರಕರ, ನಾಗರಾಜ ಕೆರೂರ, ಸಚಿನ ಮರಿಶೆಟ್ಟಿ, ಸಂಜೀವ ಡಿಗ್ಗಿ, ಶ್ರೀಶೈಲ ಅಂಗಡಿ, ರಾಜು ಗೌಳಿ, ಅರುಣ ಲೋಕಾಪುರ, ಶಂಕರ ಮಗಜಿ, ವಿಶಾಲ ಮಾಂಡಗಿ, ಮುತ್ತು ಸಜ್ಜನ, ಅಶೋಕ ಸಾಳಿಂಕೆ, ವಿಜಯ ಮನಗೂಳಿ, ಶಂಕ್ರಯ್ಯಹಂಚಿನಮಠ, ವಿರೇಶ ಹಿರೇಮಠ, ಚರಣ ಜಾಧವ, ವಿಠಲ ಕಾಳಬರ,
ಈರಣ್ಣ ವಿಜಯಪುರ, ಹನಮಂತ ಕರಾಡೆ, ನಾಗರಾಜ ಕಾಂಬಳೆ, ಶಾಂತಾಬಾಯಿ ಗೋಣಿ, ವಿಜಯಲಕ್ಷ್ಮೀ
ಅಂಗಡಿ, ಗಂಗಮ್ಮ ರಜಪೂತ, ಉಮಾ ಗವಿಮಠ, ಸುಭದ್ರಾ ದಶಮನಿ, ಸಂಗಮ್ಮ ನಾಶಿ, ರೇಖಾ ಮುರಡಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next