Advertisement

ಲಸಿತ್‌ ಮಾಲಿಂಗಗೆ ಮತ್ತೆ ತವರಿನಿಂದ ಕರೆ

05:30 AM Apr 03, 2019 | Team Udayavani |

ಮುಂಬೈ: ಈ ಬಾರಿಯ ಐಪಿಎಲ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗ ಲಸಿತ ಮಾಲಿಂಗ ಅವರ ಉಪಸ್ಥಿತಿ ಅಡ್ಡ ಗೋಡೆಯ ಮೇಲೆ ದೀಪ ಇರಿಸಿದಂತಾಗಿದೆ. ಕಳೆದ ವಾರವಷ್ಟೇ ಮುಂಬೈ ತಂಡವನ್ನು ಸೇರಿಕೊಂಡಿದ್ದ ಸ್ಟಾರ್‌ ಬೌಲರ್‌ ಮತ್ತೂಮ್ಮೆ ತಂಡಕ್ಕೆ ಅಲಭ್ಯರಾಗಲಿದ್ದಾರೆ. ಮುಂಬರುವ ವಿಶ್ವಕಪ್‌ ಕೂಟವನ್ನು ಗಮನದಲ್ಲಿರಿಸಿಕೊಂಡು ಶ್ರೀಲಂಕಾ ಸ್ಥಳೀಯ ಏಕದಿನ ಟೂರ್ನಿಯನ್ನು ಆಯೋಜಿಸಿದೆ. ಪ್ರತಿಷ್ಠಿತ ಕೂಟಕ್ಕಾಗಿ ತಂಡವನ್ನು ಸಿದ್ಧಪಡಿಸುವ ಸಲುವಾಗಿ ವಿಶ್ವಕಪ್‌ ಆಯ್ಕೆ ಪಂದ್ಯಗಳನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಆಡಿಸುತ್ತಿದ್ದು, ಏ.4ರಿಂದ 11ರ ವರೆಗೆ ಈ ಪಂದ್ಯಗಳು ನಡೆಯಲಿವೆ. ಹೀಗಾಗಿ ಶ್ರೀಲಂಕಾ ಸ್ಟಾರ್‌ ಆಟಗಾರನಿಗೆ ತವರಿನಿಂದ ಕರೆ ಬಂದಿದೆ. ಈ ವಿಷಯವನ್ನು ಶ್ರೀಲಂಕಾ ತಂಡದ ಪ್ರಧಾನ ಆಯ್ಕೆಗಾರ ಖಚಿತ ಪಡಿಸಿದ್ದಾರೆ. ಕಳೆದ ವಾರವಷ್ಟೇ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮಾಲಿಂಗ ಅವರಿಗೆ ಪೂರ್ಣವಾಗಿ ಐಪಿಎಲ್‌ ನಲ್ಲಿ ಆಡುವಂತೆ ಅನುಮತಿ ನೀಡಿತ್ತು. ಒಂದು ವಾರವಾಗುವುದರೊಳಗೆ ಮತ್ತೂಮ್ಮೆ ತನ್ನ ನಿಲುವು ಬದಲಾಯಿಸಿದ ಲಂಕಾ ನಡವಳಿಕೆ ಎಲ್ಲರಲ್ಲೂ
ಅಚ್ಚರಿ ಮೂಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next