Advertisement

ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್‌: ಸಿಂಧು, ಪ್ರಣಯ್‌ ಸೆಮಿಫೈನಲ್‌ ಪ್ರವೇಶ

11:52 PM May 26, 2023 | Team Udayavani |

ಕೌಲಾಲಂಪುರ: ಸ್ಟಾರ್‌ ಶಟ್ಲರ್‌ಗಳಾದ ಪಿ.ವಿ. ಸಿಂಧು ಮತ್ತು ಎಚ್‌.ಎಸ್‌. ಪ್ರಣಯ್‌ “ಮಲೇಷ್ಯಾ ಮಾಸ್ಟರ್ ಸೂಪರ್‌-500′ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಕೆ. ಶ್ರೀಕಾಂತ್‌ ಕೂಟದಿಂದ ನಿರ್ಗಮಿಸಿದ್ದಾರೆ.

Advertisement

6ನೇ ಶ್ರೇಯಾಂಕ ಹೊಂದಿರುವ ಪಿ.ವಿ. ಸಿಂಧು ವನಿತಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ತೀವ್ರ ಪೈಪೋಟಿಯೊಡ್ಡಿದ ತನಗಿಂತ ಕೆಳ ರ್‍ಯಾಂಕಿಂಗ್‌ ಆಟಗಾರ್ತಿ, ಚೀನದ ಯೀ ಮಾನ್‌ ಜಾಂಗ್‌ ಅವರನ್ನು 21-16, 13-21, 22-20 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಕಳೆದ “ಆಲ್‌ ಇಂಗ್ಲೆಂಡ್‌ ಓಪನ್‌’ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡರು.

ಸಿಂಧು ಅವರಿನ್ನು 7ನೇ ಶ್ರೇಯಾಂಕದ, ವಿಶ್ವದ ನಂ.9 ಆಟಗಾರ್ತಿಯಾಗಿರುವ ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ಟುಂಜುಂಗ್‌ ಸವಾಲನ್ನು ಎದುರಿಸಲಿದ್ದಾರೆ. ಈ ಪಂದ್ಯ ಶನಿವಾರ ನಡೆಯಲಿದೆ. ದಿನದ ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಟುಂಜುಂಗ್‌ ದ್ವಿತೀಯ ಶ್ರೇಯಾಂಕದ ಚೀನೀ ಆಟಗಾರ್ತಿ ಯೀ ಜೀ ವಾಂಗ್‌ ಅವರನ್ನು 21-18, 22-20 ಅಂತರದಿಂದ ಪರಾಭವಗೊಳಿಸಿದರು.

ಸದ್ಯ ಟುಂಜುಂಗ್‌ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಎಪ್ರಿಲ್‌ನಲ್ಲಿ ನಡೆದ “ಮ್ಯಾಡ್ರಿಡ್‌ ಮಾಸ್ಟರ್’ ಫೈನಲ್‌ನಲ್ಲಿ ಇವರೆದುರು ಸಿಂಧು ಪರಾಭವ ಗೊಂಡಿದ್ದರು. ಆದರೆ ಟುಂಜುಂಗ್‌ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಸಿಂಧು ಸೋಲನುಭವಿಸಿದ್ದು ಈ ಪಂದ್ಯದಲ್ಲಿ ಮಾತ್ರ.

ತಪ್ಪಿದ ಇಂಡಿಯನ್‌ ಸೆಮಿಫೈನಲ್‌
ವಿಶ್ವದ 9ನೇ ರ್‍ಯಾಂಕಿಂಗ್‌ ಆಟಗಾರನಾಗಿರುವ ಎಚ್‌.ಎಸ್‌. ಪ್ರಣಯ್‌ ಜಪಾನ್‌ನ ಕೆಂಟ ನಿಶಿಮೊಟೊ ಅವರನ್ನು ಜಿದ್ದಾಜಿದ್ದಿ ಕಾಳಗದಲ್ಲಿ 25-23, 18-21, 21-13ರಿಂದ ಮಣಿಸಿದರು. ಪ್ರಣಯ್‌ ಅವರಿನ್ನು 57ನೇ ರ್‍ಯಾಂಕಿಂಗ್‌ನ ಇಂಡೋನೇಷ್ಯಾ ಆಟಗಾರ ಕ್ರಿಸ್ಟಿಯನ್‌ ಆದಿನಾಥ ವಿರುದ್ಧ ಆಡಲಿದ್ದಾರೆ. ಆದಿನಾಥ ಭಾರತದ ಮತ್ತೋರ್ವ ಆಟಗಾರ ಕೆ. ಶ್ರೀಕಾಂತ್‌ಗೆ 16-21, 21-16, 21-11 ಅಂತರದ ಸೋಲುಣಿಸಿದರು. ಇಲ್ಲವಾದರೆ “ಆಲ್‌ ಇಂಡಿಯನ್‌ ಸೆಮಿಫೈನಲ್‌’ ಸ್ಪರ್ಧೆಯೊಂದನ್ನು ಕಾಣಬಹುದಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next