Advertisement

ಮಳಲಿ ದರೋಡೆ: ಪ್ರಮುಖ ರೂವಾರಿ ಬಂಧನ

09:18 AM Jul 23, 2019 | keerthan |

ಬಜಪೆ: ಮಳಲಿಯಲ್ಲಿ ಜು. 14ರಂದು ನಡೆದಿದ್ದ ದರೋಡೆ ಪ್ರಕರಣದ ಪ್ರಮುಖ ರೂವಾರಿ, ಕುಖ್ಯಾತ ಆರೋಪಿ ರೌಡಿ ಶೀಟರ್‌ ಉಳಾಯಿಬೆಟ್ಟಿನ ಮಹಮ್ಮದ್‌ ಖಾಲಿದ್‌ ಯಾನೆ ಕೋಯ(32)ನನ್ನು ಬಜಪೆ ಪೊಲೀಸರು ಸೋಮವಾರ ಬೆಳಗ್ಗೆ ಉಳಾಯಿಬೆಟ್ಟಿನಿಂದ ಬಂಧಿಸಿದ್ದಾರೆ. ಈತನಿಂದ 50 ಸಾ. ರೂ., ಎರಡು ಮೊಬೈಲ್‌, ತಲವಾರು ಹಾಗೂ ಚೂರಿಯನ್ನು ವಶಕ್ಕೆ ಪಡೆಯಲಾಗಿದೆ.

Advertisement

ಮಹಮ್ಮದ್‌ ಖಾಲಿದ್‌ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ 4 ಕೊಲೆ ಯತ್ನ ಸಹಿತ ಒಟ್ಟು 9 ಪ್ರಕರಣ, ಬಜಪೆ ಠಾಣೆಯಲ್ಲಿ ಒಂದು ಕೊಲೆ ಸಹಿತ ಒಟ್ಟು 4 ಪ್ರಕರಣ ದಾಖಲಾಗಿವೆ. ಈತನನ್ನು ಗಡೀಪಾರು ಮಾಡಲಾಗಿದ್ದರೂ ತಲೆಮರೆಸಿಕೊಂಡು ಇತರರೊಂದಿಗೆ ಸೇರಿ ಫೈನಾನ್ಸರ್‌ ಸೆಂಥಿಲ್‌ ಕುಮಾರ್‌ ಅವರನ್ನು ಹಾಡಹಗಲೇ ಮಳಲಿಯಲ್ಲಿ ಹಗಲೇ ದರೋಡೆ ಮಾಡಿದ್ದ.

ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಮೂಳೂರು ಗ್ರಾಮದ ಮಠದಗುಡ್ಡೆ ಸೈಟಿನ ಅಬ್ದುಲ್‌ ಅಜೀಜ್‌ ನೌಷಾದ್‌ ಯಾನೆ ಅಕಲ್‌ (19), ಬಡಗುಳಿಪಾಡಿ ಗ್ರಾಮದ ನಾರ್ಲಪದವಿನ ಮಹಮ್ಮದ್‌ ಮುಸ್ತಫಾ ಯಾನೆ ಮುಸ್ತಫಾ (23), ಉಳಾಯಿಬೆಟ್ಟು ಗ್ರಾಮ ಪಟ್ರಕೋಡಿ ಹೌಸ್‌ನ ಆಶ್ಲೇಷ್‌ ಎ. ಕೋಟ್ಯಾನ್‌ ಯಾನೆ ಅಣ್ಣು (20), ಮಂಗಳೂರು ಬೋಳಾರದ ಮಹಮ್ಮದ್‌ ಆಶಿಕ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next