Advertisement

ಮಜೂರು : ಶ್ರೀ ಕೃಷ್ಣ ಜನ್ಮಾಷ್ಟಮಿ ದಿನದಂದು ತ್ರಿವಳಿ ಕರುಗಳಿಗೆ ಜನ್ಮ ನೀಡಿದ ಬೊಳ್ಳಿ

05:48 PM Sep 10, 2020 | sudhir |

ಕಾಪು : ಕಾಪು ತಾಲೂಕಿನ ಮಜೂರು ಗ್ರಾಮದ ಸಾನದ ಮನೆ ರಮೇಶ್ ಪೂಜಾರಿ ಅವರ ಹಸುವೊಂದು ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ತ್ರಿವಳಿ ಕರುಗಳಿಗೆ ಜನ್ಮ ನೀಡಿದೆ.

Advertisement

ಬೊಳ್ಳಿ ಹೆಸರಿನ ಹಸುವಿಗೆ ಇದು ನಾಲ್ಕನೇ ಗರ್ಭಧಾರಣೆಯಾಗಿದ್ದು ಗುರುವಾರ ನಾಲ್ಕನೇ ಬಾರಿಗೆ ಕರು ಹಾಕುವ ವೇಳೆ ಎರಡು ಗಂಡು ಮತ್ತು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ.

ಗುರುವಾರ ಬೆಳಗ್ಗೆ ಸಹಜ ರೀತಿಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯವರೇ ಹಸುವಿಗೆ ಕರು ಹಾಕಲು ಸಹಯೋಗ ನೀಡಿದರು. ಬಳಿಕ‌ ಪಶು ವೈದ್ಯಾದಿಕಾರಿ ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಅವರು ಆಗಮಿಸಿ ದನ ಮತ್ತು ಕರುಗಳ ಆರೋಗ್ಯ ತಪಾಸಣೆ ನಡೆಸಿದ್ದಾರೆ.

ಇದನ್ನೂ ಓದಿ : ಲಡಾಖ್-ಫಿಂಗರ್ 4; ತಂತ್ರಗಾರಿಕೆಯಿಂದಲೇ ಚೀನಾ ಸೇನೆಯನ್ನು ಕಟ್ಟಿ ಹಾಕಿದ ಭಾರತೀಯ ಸೇನಾಪಡೆ!

Advertisement

ದೇಶೀ ತಳಿಯ ಹಸು ಬೊಳ್ಳಿ ಮತ್ತು ಮೂರು ಪುಟ್ಟ ಕರುಗಳೂ ಆರೋಗ್ಯ ವಂತವಾಗಿದ್ದು, ತ್ರಿವಳಿ ಕರುಗಳ ವೀಕ್ಷಣೆಗೆ ಗ್ರಾಮದ ಜನ ಕುತೂಹಲದಿಂದ ಮಜೂರು ಸಾನದಮನೆಗೆ ಆಗಮಿಸಲಾರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next