Advertisement

ಸಾಮಾಜಿಕ ಅಂತರ ಕಾಪಾಡಿ: ಮಹಾಂತೇಶ

07:38 AM Jun 20, 2020 | Suhan S |

ಚಿಂಚೋಳಿ: ಕೋವಿಡ್ ಹರಡದಂತೆ ನಾವೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸಿಪಿಐ ಮಹಾಂತೇಶ ಪಾಟೀಲ ಹೇಳಿದರು.

Advertisement

ಪಟ್ಟಣದಲ್ಲಿ ಗುರುವಾರ ಮಾಸ್ಕ್ ದಿನಾಚರಣೆ ನಿಮಿತ್ತ ಪೊಲೀಸ್‌ ಇಲಾಖೆಯಿಂದ ಪಟ್ಟಣದ ಡಾ|ಬಿ.ಆರ್‌.ಅಂಬೇಡ್ಕರ ವೃತ್ತದಿಂದ ಬಸ್‌ ಡಿಪೋ ಕ್ರಾಸ್‌ವರೆಗೆ ಪಾದಯಾತ್ರೆ ನಡೆಸಿದ ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಪಿಎಸ್‌ಐ ರಾಜಶೇಖರ ರಾಠೊಡ್‌, ಪುರಸಭೆ ಸದಸ್ಯರಾದ ಶೇಷಾದ್ರಿ ಕಳಸ್ಕರ, ಆನಂದ ಟೈಗರ, ಅಬ್ದುಲ್‌ ಬಾಸೀತ, ಜಗನ್ನಾಥ ಗುತ್ತೆದಾರ, ತಾಲೂಕು ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ಮುಖಂಡರಾದ ಕೆ.ಎಂ. ಬಾರಿ, ಅಮರ ಲೊಡನೊರ, ಆಕಾಶ ಕೊಳ್ಳುರ, ಪ್ರವೀಣಕುಮಾರ, ಶ್ರೀಮಂತ ಕಟ್ಟಿಮನಿ, ಗಿರಿರಾಜ ನಾಟೀಕಾರ, ಶ್ರೀಕಾಂತ ಜಾನಕಿ, ಭೀಮಶೆಟ್ಟಿ ಜಾಬಶೆಟ್ಟಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next