Advertisement

ಉತ್ತಮ ಜೀವನಶೈಲಿಯಿಂದ ಆರೋಗ್ಯ ಕಾಯ್ದುಕೊಳ್ಳಿ

06:14 PM Mar 19, 2022 | Team Udayavani |

ಧಾರವಾಡ: ಇಲ್ಲಿನ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ನೆಪ್ರೊಲಜಿ ವಿಭಾಗದಿಂದ ಮೂತ್ರಪಿಂಡ ಆರೋಗ್ಯ ಕುರಿತು ಅಗತ್ಯ ಜಾಗೃತಿ ಮೂಡಿಸುವ ಧ್ಯೇಯದೊಂದಿಗೆ ವಿಶ್ವ ಕಿಡ್ನಿ ದಿನ ಆಚರಿಸಲಾಯಿತು.

Advertisement

ಎಸ್‌ಡಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ನಿರಂಜನಕುಮಾರ ಮಾತನಾಡಿ, ಮೂತ್ರಪಿಂಡ ಕಸಿ ಮಾಡುವುದರಲ್ಲಿ ಅನೇಕ ವಿಭಾಗದವರು ಒಟ್ಟುಗೂಡಿಕೊಂಡು ಮಾಡುವ ಕೆಲಸ ಸಾಹಸಮ ಯವಾಗಿದೆ. ಈ ಶ್ರಮದಲ್ಲಿ ಭಾಗಿಯಾಗಿರುವ ಎಲ್ಲರ ಕಾರ್ಯಶ್ಲಾಘನೀಯ. ಯಾವಾಗಲೂ ಒಳ್ಳೆಯ ಕೆಲಸಕ್ಕೆ ವಿಶ್ವವಿದ್ಯಾಲಯ ಬದ್ಧವಾಗಿರುತ್ತದೆ ಎಂದರು.

ನೆಪ್ರೊಲಜಿ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡಯಾಲಿಸಿಸ್‌ ಯಂತ್ರಗಳನ್ನು ಅಳವಡಿಸುವುದರ ಮೂಲಕ ಮತ್ತು ಡಿಎಂ/ಎಂಸಿಎಚ್‌ ಕೋರ್ಸ್ ಗಳನ್ನು ಆರಂಭಿಸುವುದರ ಮೂಲಕ ಈ ವಿಭಾಗವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು. ಉತ್ತಮ ಜೀವನಕ್ಕಾಗಿ ಒಳ್ಳೆಯ ಜೀವನ ಶೈಲಿ ಅಳವಡಿಸಿಕೊಂಡು ಆರೋಗ್ಯದಿಂದ ಮತ್ತು ಸಂತಸದಿಂದ ಜೀವನ ಸಾಗಿಸೋಣ ಎಂದು ಹೇಳಿದರು.

ನೆಪ್ರೊಲಜಿ ವಿಭಾಗದ ಮುಖ್ಯಸ್ಥೆ ಡಾ| ಅಕ್ಕಮಹಾದೇವಿ ಮಾತನಾಡಿ, ವಿಭಾಗವು ಮೊದಲು 5 ಡಯಾಲಿಸಿಸ್‌ ಯಂತ್ರಗಳಿಂದ ಆರಂಭವಾಗಿದ್ದು ಪ್ರಸುತ್ತ 34 ಯಂತ್ರಗಳನ್ನು ಒಳಗೊಂಡಿದೆ. ಇದರಿಂದ ಉತ್ತರ ಕರ್ನಾಟಕ ಭಾಗದವರಿಗೆ ಹೆಚ್ಚು ಉಪಯುಕ್ತವಾಗಿದೆ ಎಂದರು.

ವಿಭಾಗದ ಅಭಿವೃದ್ಧಿಗೆ ಸಹಕರಿಸಿದ ಉಪ ಕುಲಪತಿಗಳಾದ ಡಾ|ನಿರಂಜನಕುಮಾರ ಅವರನ್ನು ಸನ್ಮಾನಿಸಲಾಯಿತು. ನೆಪ್ರೊಲಜಿ ವಿಭಾಗದ ಪ್ರಾಧ್ಯಪಕ ಡಾ| ಮಹೇಶ್‌ ಬೆನ್ನಿಕಲ್‌ ಅವರು ಕಿಡ್ನಿ ಸಮಸ್ಯೆಗಳ ಬಗ್ಗೆ ಮತ್ತು ಅದರ ನಿವಾರಣೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸಿದರು. ನೆಪ್ರೊಲಜಿ ವಿಭಾಗದವರು ತಯಾರಿಸಿದ “ಕಿಡ್ನಿ ಸಮಸ್ಯೆಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳು’ ಎಂಬ ಕೈಪಿಡಿಯನ್ನು ಡಾ| ಎಸ್‌. ಕೆ. ಜೋಶಿ ಬಿಡುಗಡೆಗೊಳಿಸಿದರು. ಲೆಫ್ಟಿನೆಂಟ್‌ ಕರ್ನಲ್‌ ಯು.ಎಸ್‌. ದಿನೇಶ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ| ರತ್ನಮಾಲಾ ದೇಸಾಯಿ, ಹಿರಿಯ ಎಲುಬು ಕೀಲು ತಜ್ಞ
ಡಾ| ಚಿದೇಂದ್ರ ಶೆಟ್ಟರ, ವೈದ್ಯಕೀಯ ಅಧೀಕ್ಷಕರಾದ ಡಾ| ಕಿರಣ ಹೆಗಡೆ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next