Advertisement

“ಲಾಭದ ಜತೆ ಗ್ರಾಹಕರ ಹಿತರಕ್ಷಣೆ ಕಾಯ್ದುಕೊಳ್ಳಿ’

08:45 AM Mar 20, 2018 | Team Udayavani |

ಕಟಪಾಡಿ: ಗ್ರಾಹಕರು ದೋಷಪೂರಿತ ವಸ್ತು ಕೊಂಡು ಕೊಂಡಾಗ ನ್ಯಾಯ ಪಡೆಯಲು ಬಳಕೆ ದಾರರಿಗೆ ಕಾನೂನು ರಕ್ಷಣೆ ನೀಡುತ್ತದೆ ಎಂದು ಉಡುಪಿ ಬಳಕೆದಾರರ ವೇದಿಕೆ ಸದಸ್ಯ ಯು. ಗಿರಿಧರ ಕಾಮತ್‌ ಹೇಳಿದರು.

Advertisement

ಅವರು ವಿಶ್ವ ಗ್ರಾಹಕರ‌ ದಿನಾಚರಣೆ ಅಂಗವಾಗಿ ಉದ್ಯಾವರ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಗ್ರಾಹಕರ ಕ್ಲಬ್‌ ಆಶ್ರಯದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.

ಮಾರಾಟಗಾರರು ತಮ್ಮ ಲಾಭದ ಜೊತೆಗೆ ಗ್ರಾಹಕರ ಹಿತರಕ್ಷಣೆಯನ್ನೂ ಕಾಯ್ದುಕೊಳ್ಳಬೇಕು. ಒಂದು ವೇಳೆ  ಬಳಕೆ
ದಾರರಿಗೆ ಸಮಸ್ಯೆ ಉಂಟಾದಾಗ ಪರಿಹರಿಸಿಕೊಳ್ಳಲು ಬಳಕೆದಾರರ ವೇದಿಕೆಯ ನೆರವು ಪಡೆದುಕೊಳ್ಳ ಬಹುದು.  ಗ್ರಾಹಕರಿಗೆ ಆರು ತಿಂಗಳೊಳಗೆ ಕ್ಷಿಪ್ರ ಪರಿಹಾರ ದೊರೆಯುತ್ತದೆ ಎಂದರು. ಮುಖ್ಯ ಅತಿಥಿÂ ಪ್ರತಾಪ್‌ ಕುಮಾರ್‌ ಉದ್ಯಾವರ  ಆಧುನಿಕ ಜಾಹೀರಾತು ಯುಗದಲ್ಲಿ ಸುಳ್ಳು ಜಾಹೀರಾತಿಗೆ ಮರುಳಾಗದೆ ಗ್ರಾಹಕರು ಜಾಗೃತರಾಗಿರಬೇಕು ಎಂದರು.ರೋಟರಿ ಕ್ಲಬ್‌ ವಲಯ ಸೇನಾನಿ ಕೆ.ಟಿ.ನಾಯಕ್‌, ಗ್ರಾಹಕರ ಕ್ಲಬ್‌ ಮಾರ್ಗದರ್ಶಕ  ಶಿಕ್ಷಕಿ ಪಂಚಾಕ್ಷರಿ ಎ.ವಿ.  ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಮೂಕಾಂಬೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಸ್ವಾಗತಿಸಿದರು. ವೀರೇಶ್‌ ವಂದಿಸಿದರು. ಅಶ್ವಿ‌ನಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next