Advertisement

ಅಲಹಾಬಾದ್‌ ವಿವಿ ದಲಿತ ವಿದ್ಯಾರ್ಥಿ ಹತ್ಯೆ: ಪ್ರಮುಖ ಆರೋಪಿ ಸೆರೆ

04:06 PM Feb 14, 2018 | Team Udayavani |

ಅಲಹಾಬಾದ್‌ : ಅಲಹಾಬಾದ್‌ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿಯನ್ನು ಕೊಲೆಗೈಯಲಾದ ಪ್ರಕರಣದ ಪ್ರಮುಖ ಆರೋಪಿಯನ್ನು ಇಂದು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಸುಲ್ತಾನ್‌ ಪುರ ಬಸ್‌ ನಿಲ್ದಾಣ ಪ್ರದೇಶದಿಂದ ಟ್ರಾವೆಲಿಂಗ್‌ ಟಿಕೆಟ್‌ ಪರೀಕ್ಷಕ ವಿಜಯ್‌ ಶಂಕರ್‌ ಸಿಂಗ್‌ನನ್ನು ಇಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್‌ ಸುಪರಿಂಟೆಂಡೆಂಟ್‌ ಆಕಾಶ್‌ ಕುಲಹರಿ ತಿಳಿಸಿದ್ದಾರೆ. 

26ರ ಹರೆಯದ ಡಿಲೀಪ್‌ ಎಂಬ ಎರಡನೇ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿಯನ್ನು ಜನರ ಗುಂಪೊಂದು ರೆಸ್ಟೋರೆಂಟ್‌ ಒಂದರ ಹೊರಗಡೆ ಮಾರಣಾಂತಿಕವಾಗಿ ಹೊಡೆದು ಹಲ್ಲೆಗೈದಿತ್ತು. ಎರಡು ದಿನಗಳ ಬಳಿಕ ದಿಲೀಪ್‌ ಕೊನೆಯುಸಿರೆಳೆದಿದ್ದ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next