Advertisement

ಮಹೇಶ್‌ ಜೋಷಿ ಕಸಾಪ ಅಧ್ಯಕ್ಷ: ಅಧಿಕೃತ ಘೋಷಣೆ

08:29 PM Nov 24, 2021 | Team Udayavani |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ರಾಜ್ಯಾಧ್ಯಕ್ಷರಾಗಿ ಮಹೇಶ ಜೋಷಿ ಅವರನ್ನು ಬುಧವಾರ ಚುನಾವಣ ಘೋಷಿಸಿದರು.ಒಟ್ಟು 3,10,153 ಮತಗಳಲ್ಲಿ ಜೋಷಿ ಅವರು 69,431 ಮತಗಳನ್ನು ಪಡೆದುಕೊಂಡಿದ್ದಾರೆ.

Advertisement

ಗಡಿನಾಡು – ಹೊರನಾಡು ಅಧ್ಯಕ್ಷರು ಇದೇ ಸಂದರ್ಭದಲ್ಲಿ ಗಡಿನಾಡು ಹಾಗೂ ಹೊರನಾಡು ಘಟಕಗಳ ಅಧ್ಯಕ್ಷರನ್ನೂ ಘೋಷಿಸಲಾಯಿತು.

ಮಹಾರಾಷ್ಟ್ರ ಗಡಿನಾಡು ಘಟಕದ ಅಧ್ಯಕ್ಷರಾಗಿ ಸೋಮಶೇಖರ ಜಮಶೆಟ್ಟಿ ( 298 ಮತಗಳು), ಆಂಧ್ರಪ್ರದೇಶ ಘಟಕದ ಅಧ್ಯಕ್ಷರಾಗಿ ಅಂಜನ್‌ ಕುಮಾರ್‌ (768), ಕೇರಳ ಘಟಕದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ವಿ.ಭಟ್‌ ( 294) ಅವರು ಆಯ್ಕೆ ಆಗಿದ್ದಾರೆ.

ತಮಿಳುನಾಡು ಘಟಕದ ಅಧ್ಯಕ್ಷರಾಗಿ ತಮಿಳ್‌ ಸೆಲ್ವಿ ಅವರು ವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next