Advertisement

ಬಜರಂಗದಳ ಮಾಜಿ ನಾಯಕ ಮಹೇಂದ್ರ ಕುಮಾರ್ ನಿಧನ

08:21 AM Apr 26, 2020 | keerthan |

ಚಿಕ್ಕಮಗಳೂರು: ಬಜರಂಗದಳದ ಮಾಜಿ ನಾಯಕ, ಪ್ರಗತಿಪದ ಚಿಂತಕ, ವಾಗ್ಮಿ, ಮಹೇಂದ್ರ ಕುಮಾರ್ (47) ಶನಿವಾರ ಬೆಳಗಿನ ಜಾವ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Advertisement

ಮಹೇಂದ್ರ ಕುಮಾರ್ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ವರಾಗಿದ್ದು, ಬಜರಂಗದಳ ಸಂಚಾಲಕರಾಗಿ, ಜಿಲ್ಲಾ ಸಂಚಾಲಕರಾಗಿ, ರಾಜ್ಯ ಸಹ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು.

ದತ್ತಪೀಠ ಚಲೋ ಹೋರಾಟದಲ್ಲಿ ಮಲೆನಾಡಿನ ಭಾಗದಲ್ಲಿ ಸಕ್ರೀಯವಾಗಿ ಮುಂಚೂಣಿಯಲ್ಲಿದ್ದರು.

ಚರ್ಚ್ ದಾಳಿ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದರು. ಹಿಂದೂತ್ವ ಪ್ರತಿಪಾದಕರಾದ ಮಹೇಂದ್ರ ಕುಮಾರ್ ನಂತರ ದಿನಗಳಲ್ಲಿ ಬಜರಂಗದಳ ತೊರೆದು ಜೆಡಿಎಸ್ ಸೇರಿದ್ದರು.

ಇತ್ತೀಚಿನ ದಿನಗಳಲ್ಲಿ ಪ್ರಗತಿಪರ ಚಿಂತಕರಾಗಿ ಮಹೇಂದ್ರ ಕುಮಾರ್ ಅನೇಕ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next