Advertisement

Mumbai: ಆನ್‌ಲೈನ್‌ನಲ್ಲಿ ಮರಳು ಮಾರಾಟಕ್ಕೆ ಮಹಾರಾಷ್ಟ್ರ ಸರ್ಕಾರ ನಿರ್ಧಾರ

09:05 PM Feb 15, 2024 | Team Udayavani |

ಮುಂಬೈ: ಅಕ್ರಮ ಮರಳು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ “ಲಾಭವೂ ಇಲ್ಲ- ನಷ್ಟವೂ ಇಲ್ಲ’ ಎನ್ನುವ ಆಧಾರದಲ್ಲಿ ಆನ್‌ಲೈನ್‌ ಮೂಲಕ ಇನ್ನು ಮರಳು ಮಾರಾಟ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಈ ಕುರಿತಂತೆ ಮಹಾರಾಷ್ಟ್ರ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್‌ ಮಾಹಿತಿ ನೀಡಿದ್ದು, ರಾಜ್ಯದಲ್ಲಿರುವ ಮರಳು ಗಣಿಗಾರಿಕೆ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತರಲು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.

Advertisement

ಅದರಂತೆ ಆನ್‌ಲೈನ್‌ ಮೂಲಕ ಮರಳು ಮಾರಾಟ ಮಾಡಲು ನಿರ್ಧರಿಸಿದ್ದೇವೆ. ಇದರಿಂದ ಅಗ್ಗದ ದರದಲ್ಲಿ ಜನರಿಗೆ ಮರಳು ಲಭ್ಯವಾಗುವುದರ ಜೊತೆಗೆ, ಅಕ್ರಮ ಮರಳು ಗಣಿಗಾರಿಕೆ, ಸಂಗ್ರಹ ಸಮಸ್ಯೆಗೂ ಪರಿಹಾರ ಸಿಗಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next