Advertisement

ಒಬಿಸಿಗೆ ಮೀಸಲು ಸಿಗದಿದ್ದರೆ ರಾಜಕೀಯ ನಿವೃತ್ತಿ: ಫ‌ಡ್ನವೀಸ್‌

10:35 PM Jun 26, 2021 | Team Udayavani |

ನಾಗಪುರ: ಮಹಾರಾಷ್ಟ್ರದ ವಿರೋಧಪಕ್ಷದ ನಾಯಕನಾಗಿರುವ, ಮಾಜಿ ಮುಖ್ಯಮಂತ್ರಿ, ಬಿಜೆಪಿಯ ದೇವೇಂದ್ರ ಫ‌ಡ್ನವೀಸ್‌; ಮಹತ್ವದ ರಾಜಕೀಯ ದಾಳವೊಂದನ್ನು ಉರುಳಿಸಿದ್ದಾರೆ.

Advertisement

ಮಹಾರಾಷ್ಟ್ರದ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸ್ಥಳೀಯಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಸಿಗುವವರೆಗೆ ಹೋರಾಡುತ್ತೇನೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಒಬಿಸಿಗೆ ಮೀಸಲಾತಿ ಜಾರಿ ಮಾಡಲಾಗುತ್ತದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆಂದು ಫ‌ಡ್ನವೀಸ್‌ ಹೇಳಿದ್ದಾರೆ!

ಈ ವಿಷಯಕ್ಕೆ ಸಂಬಂಧಿಸಿದಂತೆ ಅವರ ನೇತೃತ್ವದಲ್ಲಿ ಶನಿವಾರ ನಾಗ್ಪುರ ವೆರೈಟಿ ಸ್ಕ್ವೇರ್‌ನಲ್ಲಿ ರಸ್ತೆ ತಡೆ ನಡೆದಿದೆ. ಹಾಗೆಯೇ ಮಹಾರಾಷ್ಟ್ರದ ಮಹಾ ವಿಕಾಸ್‌ ಅಘಾಡಿ (ಎಂವಿಎ) ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ಎಂವಿಎ ಸರ್ಕಾರ ಕೇಂದ್ರದತ್ತ ಬೆರಳು ತೋರಿಸುತ್ತಿದೆ. ಇದು ಪಕ್ಕಾ ಸುಳ್ಳು, ಈ ವಿಷಯವನ್ನು ಕಾನೂನು ಜಾರಿ ಮಾಡುವುದರ ಮೂಲಕ ರಾಜ್ಯದಲ್ಲೇ ನಿರ್ಧರಿಸಬಹುದು. ಅದನ್ನು ಮಾಡದಿರುವುದಕ್ಕೇ ಮಹಾರಾಷ್ಟ್ರವೊಂದನ್ನು ಹೊರತುಪಡಿಸಿ, ಉಳಿದೆಲ್ಲ ರಾಜ್ಯಗಳಲ್ಲಿ ಒಬಿಸಿ ಮೀಸಲು ಇದೆ ಎಂದಿದ್ದಾರೆ.

ಇದನ್ನೂ ಓದಿ :ತಮಿಳುನಾಡಿನ 21 ಜಿಲ್ಲೆಗಳಲ್ಲಿ 100 ರೂ. ದಾಟಿದೆ ಪೆಟ್ರೋಲ್‌ ದರ

ಒಬಿಸಿ ಮೀಸಲು ವಿಚಾರ ಸಂಬಂಧ ಚಕ್ಕಾ ಜಾಮ್‌ ನಡೆಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಫ‌ಡ್ನವೀಸ್‌ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next