Advertisement

ಅಮರಾವತಿಯಲ್ಲಿ ಹಿಂಸೆಗೆ ತಿರುಗಿದ ಬಂದ್‌

11:33 PM Nov 13, 2021 | Team Udayavani |

ಮುಂಬಯಿ: ತ್ರಿಪುರಾ ಗಲಭೆಯ ಬೆಂಕಿ ಈಗ ಮಹಾರಾಷ್ಟ್ರಕ್ಕೂ ವ್ಯಾಪಿಸಿದೆ. ಶನಿವಾರ ಬಿಜೆಪಿ ಆಯೋ ಜಿಸಿದ್ದ ಅಮರಾವತಿ ಬಂದ್‌ ಹಿಂಸೆಗೆ ತಿರುಗಿದ್ದು, ಹಲವು ವಾಹನಗಳು, ಅಂಗಡಿ- ಮುಂಗಟ್ಟುಗಳು, ಧಾರ್ಮಿಕ ಕೇಂದ್ರಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Advertisement

ತ್ರಿಪುರಾದಲ್ಲಿ ಅಲ್ಪಸಂಖ್ಯಾಕರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಕೆಲವು ಮುಸ್ಲಿಂ ಸಂಘಟನೆಗಳು ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಕೆಲವು ಕಡೆ ಕಲ್ಲುತೂರಾಟದಂಥ ಘಟನೆಗಳು ನಡೆದಿದ್ದು, ಅದನ್ನು ಖಂಡಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಶನಿವಾರ ಬಂದ್‌ಗೆ ಕರೆ ನೀಡಿದ್ದವು. ಬಂದ್‌ ವೇಳೆ ಲಾಲ್‌ಖಾಡಿ ಪ್ರದೇಶ, ಚಾಂದಿನಿ ಚೌಕ್‌, ಪಠಾಣ್‌ ಚೌಕ್‌ನಲ್ಲಿ ಪ್ರತಿಭಟನಕಾರರ ಗುಂಪು, ಏಕಾಏಕಿ ಅಂಗಡಿಗಳು, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿತು. ರಾಜ್‌ಕಮಲ್‌ ಚೌಕ್‌ನಲ್ಲಿ ಕಾರು ಗಳಿಗೂ ಬೆಂಕಿ ಹಚ್ಚಿ, ಕೆಲವು ಧಾರ್ಮಿಕ ಕೇಂದ್ರ ಗಳಿಗೂ ಹಾನಿ ಮಾಡಿತು. ಹಲವು ವಾಹನಗಳ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರು ಸೆಕ್ಷನ್‌ 144 ಜಾರಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next