Advertisement

ಮಹಾರಾಷ್ಟ್ರ : ಹೆತ್ತವರನ್ನು ನಿರ್ಲಕ್ಷ್ಯ ಮಾಡಿದ 7 ಉದ್ಯೋಗಿಗಳ ಶೇ.30 ವೇತನ ಕಟ್‌!

11:07 PM Feb 13, 2021 | Team Udayavani |

ಔರಂಗಾಬಾದ್‌: ವಯಸ್ಸಾದ ಹೆತ್ತವರನ್ನು ನಿರ್ಲಕ್ಷಿಸಿದವರಿಗೆ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಯೊಂದು ತಕ್ಕ ಶಿಕ್ಷೆಯನ್ನೇ ನೀಡಿದೆ.

Advertisement

ಅಪ್ಪ-ಅಮ್ಮನನ್ನು ನೋಡಿಕೊಳ್ಳದ 7 ಮಂದಿ ಉದ್ಯೋಗಿಗಳ ವೇತನದಲ್ಲಿ ಶೇ.30ರಷ್ಟು ಕಡಿತಗೊಳಿಸಲಾಗಿದೆ ಎಂದು ಇಲ್ಲಿನ ಲಾತೂರು ಜಿಲ್ಲಾ ಪರಿಷತ್‌ ಅಧ್ಯಕ್ಷ ರಾಹುಲ್‌ ಬೋಂದ್ರೆ ತಿಳಿಸಿದ್ದಾರೆ.

ವೇತನದಿಂದ ಕಡಿತವಾದ ಮೊತ್ತವನ್ನು ಆಯಾ ಉದ್ಯೋಗಿಯ ಹೆತ್ತವರ ಖಾತೆಗೆ ಜಮೆ ಮಾಡಲಾಗುತ್ತದೆ. ಕಳೆದ ನವೆಂಬರ್‌ನಲ್ಲಿ ಜಿಲ್ಲಾ ಪರಿಷತ್‌ ಇಂಥದ್ದೊಂದು ತೀರ್ಮಾನ ಕೈಗೊಂಡಿತ್ತು. ಹೆತ್ತವರ ನಿರ್ಲಕ್ಷ್ಯಕ್ಕೆ ಸಂಬಂಧಿಸಿ 12 ದೂರುಗಳು ಬಂದಿದ್ದು, ಈ ಪೈಕಿ 7 ಮಂದಿಯ ವೇತನ ಕಡಿತಗೊಳಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ:ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ : 4ನೇ ಸುತ್ತಿನಲ್ಲಿ ನಡಾಲ್‌, ಬಾರ್ಟಿ, ಮೆಡ್ವೆಡೇವ್

Advertisement

Udayavani is now on Telegram. Click here to join our channel and stay updated with the latest news.

Next