Advertisement

ನ್ಯಾಶನಲ್ ಹೈವೇಯಲ್ಲಿಯೇ ಪೊಲೀಸ್ ಕಸ್ಟಡಿಯಿಂದ ಮೂವರು ಆರೋಪಿಗಳು ಎಸ್ಕೇಪ್!

10:00 AM Aug 09, 2019 | Nagendra Trasi |

ಮಹಾರಾಷ್ಟ್ರ(ಪಾಲ್ಘಾರ್): ಕೋರ್ಟ್ ಗೆ ಹಾಜರುಪಡಿಸಿ ವಾಪಸ್ ಆಗುವ ವೇಳೆ ಮೂವರು ಕೈದಿಗಳು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿರುವ ಘಟನೆ ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ದರೋಡೆ ಪ್ರಕರಣದಲ್ಲಿ ಮೂವರು ಕೈದಿಗಳು ಥಾಣೆಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಬುಧವಾರ ಮೂವರನ್ನು ಮುಂಬೈನಿಂದ ದಾದ್ರಾ-ನಾಗರ್ ಹವೆಲಿ ಜಿಲ್ಲಾ ಕೋರ್ಟ್ ಗೆ ಪೊಲೀಸರು ಕರೆದೊಯ್ದಿದ್ದರು.

ಕೋರ್ಟ್ ವಿಚಾರಣೆ ನಂತರ ಮುಂಬೈಗೆ ವಾಪಸ್ ಆಗುತ್ತಿದ್ದ ವೇಳೆ ಕೈದಿಯೊಬ್ಬ ವಾಂತಿ ಬರುವುದಾಗಿ ತಿಳಿಸಿದ್ದರಿಂದ, ಮುಂಬೈ-ಅಹಮದಾಬಾದ್ ಹೈವೇಯ ಬದಿಯಲ್ಲಿ ಪೊಲೀಸ್ ವ್ಯಾನ್ ನಿಲ್ಲಿಸಿದ್ದರು. ಕೈದಿ ಕೆಳಗಿದ ಸಂದರ್ಭದಲ್ಲಿ ಮೂವರು ಕೈದಿಗಳು ಪೊಲೀಸರನ್ನು ತಳ್ಳಿಹಾಕಿ ಓಡಿ ಹೋಗಿರುವುದಾಗಿ ಪಾಲ್ಘಾರ್ ಪೊಲೀಸರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದರೋಡೆ ಪ್ರಕರಣದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿದ್ದ ಜೈರಾಮ್ ದಳ್ವಿ(21ವರ್ಷ), ಗಣೇಶ್ ದಳ್ವಿ(20ವರ್ಷ) ಮತ್ತು ಮಾರ್ಟಿನ್ ಮಾಧಾ(30ವರ್ಷ) ಪರಾರಿಯಾಗಿದ್ದು, ಮೂವರು ಕೈದಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next