Advertisement

Maharaja Trophy: ಟೈ ಟೈ ಟೈ… ಹುಬ್ಬಳ್ಳಿ ಜೈ !

11:51 PM Aug 23, 2024 | Team Udayavani |

ಬೆಂಗಳೂರು: ಶುಕ್ರವಾರದ ಬೆಂಗಳೂರು ಬ್ಲಾಸ್ಟರ್ ಮತ್ತು ಹುಬ್ಬಳ್ಳಿ ಟೈಗರ್ ನಡುವಿನ “ಮಹಾರಾಜ ಟ್ರೋಫಿ’ ಕ್ರಿಕೆಟ್‌ ಪಂದ್ಯ ಸಾಲು ಸಾಲು ಸೂಪರ್‌ ಓವರ್‌ಗಳಿಗೆ ಸಾಕ್ಷಿಯಾ ಯಿತು. ಕೊನೆಗೂ 3ನೇ ಸೂಪರ್‌ ಓವರ್‌ನಲ್ಲಿ ಹುಬ್ಬಳ್ಳಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹುಬ್ಬಳ್ಳಿ ಸರಿಯಾಗಿ 20 ಓವರ್‌ಗಳಲ್ಲಿ 164ಕ್ಕೆ ಆಲೌಟ್‌ ಆಯಿತು. ಜವಾಬಿತ್ತ ಬೆಂಗ ಳೂರು 9 ವಿಕೆಟಿಗೆ 164 ರನ್‌ ಬಾರಿಸಿತು. ಚೇಸಿಂಗ್‌ ವೇಳೆ ಬೆಂಗಳೂರು ತಂಡದ ನಾಯಕ ಮಾಯಾಂಕ್‌ ಅಗರ್ವಾಲ್‌ 54 ರನ್‌ ಹೊಡೆದರು. ಇದು ಈ ಪಂದ್ಯದ ಏಕೈಕ ಅರ್ಧ ಶತಕವಾಗಿತ್ತು. ಅಂತಿಮ ಎಸೆತದಲ್ಲಿ ಕ್ರಾಂತಿ ಕುಮಾರ್‌ ರನೌಟ್‌ ಆಗುವುದರೊಂದಿಗೆ ಸ್ಕೋರ್‌ ಸಮನಾಯಿತು.

ಸೂಪರ್‌ ಓವರ್
ಮೊದಲ ಸೂಪರ್‌ ಓವರ್‌ನಲ್ಲಿ ಬೆಂಗಳೂರು ಒಂದು ವಿಕೆಟಿಗೆ 10 ರನ್‌ ಮಾಡಿದರೆ, ಹುಬ್ಬಳ್ಳಿ ವಿಕೆಟ್‌ ನಷ್ಟವಿಲ್ಲದೆ 10 ರನ್‌ ಗಳಿಸಿತು.

ದ್ವಿತೀಯ ಸೂಪರ್‌ ಓವರ್‌ನಲ್ಲಿ ಹುಬ್ಬಳ್ಳಿ ವಿಕೆಟ್‌ ನಷ್ಟವಿಲ್ಲದೆ 8 ರನ್‌ ಗಳಿಸಿತು. ಬೆಂಗಳೂರು ಒಂದು ವಿಕೆಟಿಗೆ 8 ರನ್‌ ಮಾಡಿತು. ಪಂದ್ಯ 3ನೇ ಸೂಪರ್‌ ಓವರ್‌ನತ್ತ ಮುಖ ಮಾಡಿತು.

ಈ ಸೂಪರ್‌ ಓವರ್‌ನ ಮೊದಲ ಎಸೆತದಲ್ಲೇ ಬೆಂಗಳೂರು ತಂಡ ವಿಕೆಟ್‌ ಕಳೆದುಕೊಂಡಿತಾದರೂ 12 ರನ್‌ ಗಳಿಸುವಲ್ಲಿ ಯಶಸ್ವಿಯಾಯಿತು. ಹುಬ್ಬಳ್ಳಿ ವಿಕೆಟ್‌ ನಷ್ಟವಿಲ್ಲದೆ 13 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು. ಕ್ರಾಂತಿ ಕುಮಾರ್‌ ಓವರ್‌ನ ಕೊನೆಯ ಎಸೆತವನ್ನು ಬೌಂಡರಿಗೆ ಬಡಿದಟ್ಟಿದ ಮನ್ವಂತ್‌ ಕುಮಾರ್‌ ತಂಡದ ಗೆಲುವನ್ನು ಸಾರಿದರು.
ಇದು 6 ಪಂದ್ಯಗಳಲ್ಲಿ ಹುಬ್ಬಳ್ಳಿಗೆ ಒಲಿದ 5ನೇ ಗೆಲುವು. ಅದು 10 ಅಂಕಗ ಳೊಂದಿಗೆ ಮತ್ತೆ ಅಗ್ರಸ್ಥಾನಿ ಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next