Advertisement

Maharaja Trophy ಕ್ರಿಕೆಟ್‌: ಹುಬ್ಬಳ್ಳಿಗೆ ಅಗ್ರಸ್ಥಾನದ ಗೌರವ

11:50 PM Aug 26, 2023 | Team Udayavani |

ಬೆಂಗಳೂರು: ಹುಬ್ಬಳ್ಳಿ ಟೈಗರ್ ಅಗ್ರಸ್ಥಾನದ ಗೌರವದೊಂದಿಗೆ “ಮಹಾರಾಜ ಟ್ರೋಫಿ’ ಕೆಎಸ್‌ಸಿಎ ಟಿ20 ಪಂದ್ಯಾವಳಿಯ ಸೆಮಿಫೈನಲ್‌ಗೆ ಲಗ್ಗೆ ಇರಿಸಿದೆ. ಶನಿವಾರದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಅದು ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಮಂಗಳೂರು ಡ್ರ್ಯಾಗನ್ಸ್‌ 9 ವಿಕೆಟಿಗೆ 167 ರನ್‌ ಹೊಡೆದರೆ, ಹುಬ್ಬಳ್ಳಿ ಟೈಗರ್ 18.2 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 170 ರನ್‌ ಬಾರಿಸಿತು. ಇದು 10 ಪಂದ್ಯಗಳಲ್ಲಿ ಹುಬ್ಬಳ್ಳಿ ಸಾಧಿಸಿದ 8ನೇ ಗೆಲುವು. ಮಂಗಳೂರು 9 ಪಂದ್ಯಗಳಲ್ಲಿ 5ನೇ ಸೋಲನುಭವಿಸಿ 4ನೇ ಸ್ಥಾನದಲ್ಲಿದೆ.

ಚೇಸಿಂಗ್‌ ವೇಳೆ ಹುಬ್ಬಳ್ಳಿ ಸರದಿಯಲ್ಲಿ ಮಿಂಚಿದವರೆಂದರೆ ಆರಂಭಕಾರ ಮೊಹಮ್ಮದ್‌ ತಾಹಾ ಮತ್ತು ನಾಯಕ ಮನೀಷ್‌ ಪಾಂಡೆ. ಇಬ್ಬರೂ ಅರ್ಧ ಶತಕ ಬಾರಿಸಿದರು. ತಾಹಾ ಗಳಿಕೆ 23 ಎಸೆತಗಳಿಂದ 51 ರನ್‌ (6 ಬೌಂಡರಿ, 3 ಸಿಕ್ಸರ್‌). ಪಾಂಡೆ 33 ಎಸೆತ ಎದುರಿಸಿ ಅಜೇಯ 56 ರನ್‌ ಬಾರಿಸಿದರು (1 ಬೌಂಡರಿ, 5 ಸಿಕ್ಸರ್‌).

ಮಂಗಳೂರು ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಉತ್ತಮ ಮಟ್ಟದಲ್ಲಿತ್ತು. ಆದರೆ ಇನ್ನಷ್ಟು ಬಿರುಸು ಪಡೆಯಬೇಕಿತ್ತು. ಶರತ್‌ ಬಿ.ಆರ್‌. 40, ರೋಹನ್‌ ಪಾಟೀಲ್‌ 34, ಸಿದ್ಧಾರ್ಥ್ 53 ರನ್‌ ಕೊಡುಗೆಯಿತ್ತರು. 17 ಓವರ್‌ ಮುಕ್ತಾಯಕ್ಕೆ ಸ್ಕೋರ್‌ 2ಕ್ಕೆ 151 ರನ್‌ ಆಗಿತ್ತು. ಹುಬ್ಬಳ್ಳಿ ತಂಡದ ಮಧ್ಯಮ ವೇಗಿ ಮನ್ವಂತ್‌ ಕುಮಾರ್‌ 5 ವಿಕೆಟ್‌ ಉಡಾಯಿಸಿ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next