Advertisement
ಶಿವಮೊಗ್ಗ 7 ವಿಕೆಟಿಗೆ ಕೇವಲ 149 ರನ್ ಗಳಿಸಿದರೆ, ಹುಬ್ಬಳ್ಳಿ ಬರೀ 14 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿತು. ಆರಂಭಕಾರ ರೋಹನ್ ಕದಂ ಅವರ ಅರ್ಧ ಶತಕ (54) ಹೊರತುಪಡಿಸಿದರೆ ಶಿವಮೊಗ್ಗ ಸರದಿಯಲ್ಲಿ ಯಾರಿಂದಲೂ ದೊಡ್ಡ ಮೊತ್ತ ಕಂಡುಬರಲಿಲ್ಲ. ನಿಹಾಲ್ ಉಲ್ಲಾಳ್ (7), ವಿನಯ್ ಸಾಗರ್ (13), ಅಭಿನವ್ ಮನೋಹರ್ (2) ಇನ್ನಿಂಗ್ಸ್ ಆಧರಿಸಲು ವಿಫಲರಾದರು. ಎಚ್.ಎಸ್. ಶರತ್ 18, ನಾಯಕ ಶ್ರೇಯಸ್ ಗೋಪಾಲ್ ಮತ್ತು ಪ್ರಣವ್ ಭಾಟಿಯ ತಲಾ 16 ರನ್ ಹೊಡೆದರು. ಹುಬ್ಬಳ್ಳಿ ಬೌಲಿಂಗ್ ಸರದಿಯಲ್ಲಿ ಮಿಂಚಿದವರೆಂದರೆ ಲವಿಶ್ ಕೌಶಲ್ ಮತ್ತು ಮನ್ವಂತ್ ಕುಮಾರ್ ಎಲ್. ಇಬ್ಬರೂ 2 ವಿಕೆಟ್ ಉರುಳಿಸಿದರು.
ಮೈಸೂರು ವಾರಿಯರ್ 2 ವಿಕೆಟಿಗೆ 248 ರನ್ ಪೇರಿಸಿ ಸವಾಲೊಡ್ಡಿತು. ನಾಯಕ ಕರುಣ್ ನಾಯರ್ 42 ಎಸೆತಗಳಿಂದ ಅಜೇಯ 107 ರನ್ ಬಾರಿಸಿದರು (7 ಫೋರ್, 9 ಸಿಕ್ಸರ್). ಆರ್. ಸಮರ್ಥ್ 80 ರನ್ ಹೊಡೆದರು. ಜವಾಬಿತ್ತ ಗುಲ್ಬರ್ಗ 8 ವಿಕೆಟಿಗೆ 212 ರನ್ ಮಾಡಿತು. ಫೈನಲ್ ಪಂದ್ಯ ಮಂಗಳವಾರ ನಡೆಯಲಿದ್ದು, ಸಂಜೆ 5.30ಕ್ಕೆ ಆರಂಭವಾಗಲಿದೆ.