Advertisement

ನಕಲಿ ಬಾಬಾಗಳ ಪಟ್ಟಿ ಬಿಡುಗಡೆಗೊಳಿಸಿದ ದಾಸ್‌ ಕಾಣೆ!

09:54 AM Sep 28, 2017 | Team Udayavani |

ಮುಂಬಯಿ: ಅಖಿಲ ಭಾರತೀಯ ಅಖಾಡಾ ಪರಿಷತ್‌ (ಎಬಿಎಪಿ)ಇದರ ರಾಷ್ಟ್ರೀಯ ವಕ್ತಾರ ಮಹಂತ ಮೋಹನ್‌ದಾಸ್‌ ಅವರು ಕಳೆದ 12 ದಿನಗಳಿಂದ ನಾಪತ್ತೆಯಾಗಿದ್ದು, ಅವರ  ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ತನ್ನ ರಾಷ್ಟ್ರೀಯ ವಕ್ತಾರ ಮೋಹನ್‌ದಾಸ್‌ ಅವರು ನಿಗೂಢವಾಗಿ ಕಾಣೆಯಾಗಿರುವ ಸಂಬಂಧ ಎಬಿಎಪಿ ತೀವ್ರ ಕಳವಳ ವ್ಯಕ್ತಪಡಿಸಿದ್ದು,  ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ  ಅವರನ್ನು ಹುಡುಕಲು ಶೋಧ ಕಾರ್ಯಾಚರಣೆ ಚುರುಕುಗೊಳಿಸುವಂತೆ ಆಗ್ರಹಿಸಿದೆ.

Advertisement

ಮುಂಬಯಿಯಿಂದ ಹರಿದ್ವಾರಕ್ಕೆ ರೈಲಿನಲ್ಲಿ  ಪ್ರಯಾಣಿಸುತ್ತಿದ್ದರು 
ಮಹಂತ ಮೋಹನ್‌ದಾಸ್‌ ಅವರು ಸೆ. 15ರ ಮಧ್ಯರಾತ್ರಿಯಿಂದ ಕಾಣೆಯಾಗಿದ್ದು, ಆ ಸಂದರ್ಭದಲ್ಲಿ ಅವರು ಮುಂಬಯಿಯಿಂದ ಹರಿದ್ವಾರಕ್ಕೆ  ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ವಿಶೇಷವೆಂದರೆ, ಕೆಲ ದಿನಗಳ ಹಿಂದೆಯಷ್ಟೇ  ಅಖಲ ಭಾರತೀಯ ಅಖಾಡಾ ಪರಿಷತ್‌ ನಕಲಿ ಬಾಬಾಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿತ್ತು. ಪರಿಷತ್‌ ಬಾಬಾ ರಾಮ್‌ ರಹೀಂ, ನಾರಾಯಣ್‌ ಸಾಯಿ, ಆಸಾರಾಮ್‌ ಬಾಪು, ರಾಧೇ ಮಾ ಸೇರಿದಂತೆ ಹಲವು ವ್ಯಕ್ತಿಗಳನ್ನು ನಕಲಿ ಬಾಬಾಗಳ ಪಟ್ಟಿಯಲ್ಲಿ ಸೇರಿಕೊಂಡು, ಭಕ್ತರಿಗೆ ಅವರಿಂದ ದೂರು ಇರುವಂತೆ ಸಲಹೆಯನ್ನು ನೀಡಿತ್ತು. ಇದಾದ ಕೂಡಲೇ ಮಹಂತ ಮೋಹನ್‌ದಾಸ್‌ ಅವರ ಕಣ್ಮರೆಗೆ ಪರಿಷತ್‌ನಲ್ಲಿ ತೀವ್ರ ಚಿಂತೆ ವ್ಯಕ್ತಪಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next