Advertisement

Independence Day ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ ಕಟೀಲು ದೇಗುಲದ ಮಹಾಲಕ್ಷ್ಮೀ!

01:28 AM Aug 16, 2023 | Team Udayavani |

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ರಥಬೀದಿಯಲ್ಲಿ ಭಕ್ತರು, ಕ್ಷೇತ್ರದ ಸಮೂಹ ಶಿಕ್ಷಣ ಸಂಸ್ಥೆಗಳ ಎರಡೂವರೆ ಸಾವಿರ ವಿದ್ಯಾರ್ಥಿಗಳೊಂದಿಗೆ ದೇಗುಲದ ಆನೆ ಮಹಾಲಕ್ಷ್ಮೀ ಕೂಡ ರಾಷ್ಟ್ರಧ್ವಜವನ್ನು ಸೊಂಡಿಲಿನಲ್ಲಿ ಎತ್ತಿಹಿಡಿದು ಧ್ವಜವಂದನೆ ಸಲ್ಲಿಸಿತು.

Advertisement

ನಿವೃತ್ತ ಸೈನಿಕ ಕಟೀಲು ಲಕ್ಷ್ಮೀನಾರಾಯಣ ರಾವ್‌ ಧ್ವಜಾರೋಹಣಗೈದರು. ವಿದ್ಯಾರ್ಥಿಗಳು ದೇಶ ಭಕ್ತಿಗೀತೆ ಹಾಡುತ್ತಿದ್ದಂತೆ ಸಹಸ್ರಾರು ವಿದ್ಯಾರ್ಥಿಗಳು ರಾಷ್ಟ್ರಧ್ವಜಗಳನ್ನು ಎತ್ತಿಹಿಡಿದರು. ಆಗ ಆನೆಯೂ ಬಾವುಟವನ್ನು ಸೊಂಡಿಲಿನಲ್ಲಿ ಎತ್ತಿಹಿಡಿದು ಬೀಸುತ್ತ ಸಂಭ್ರಮಿಸಿತು.

Advertisement

Udayavani is now on Telegram. Click here to join our channel and stay updated with the latest news.

Next