Advertisement

ಬಿಜೆಪಿ ಹಣಿಯಲು ಮಹಾ ಘಟಬಂಧನ: ಕೋಲ್ಕತಕ್ಕೆ ಬಂದ TDP ನಾಯ್ಡು

05:17 PM Nov 19, 2018 | Team Udayavani |

ಕೋಲ್ಕತ : 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಹಣಿಯಲು ಮಹಾ ಘಟಬಂಧನವನ್ನು ರೂಪಿಸುವ ಅಭಿಯಾನದಲ್ಲಿ ನಿರತರಾಗಿರುವ ಟಿಡಿಪಿ ಮುಖ್ಯಸ್ಥ  ಎನ್‌ ಚಂದ್ರಬಾಬು ನಾಯ್ಡು ಅವರಿಂದು ಪಶ್ಚಿಮ ಬಂಗಾಲ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಕಾಣಲು ಕೋಲ್ಕತಕ್ಕೆ ಆಗಮಿಸಿದರು. 

Advertisement

ನಾಯ್ಡು ಅವರು ಮಮತಾ ಅವರನ್ನು ಇಂದು ಸಂಜೆ ನಬನ್ನಾದಲ್ಲಿ ಭೇಟಿಯಾಗುವರೆಂದು ಎಎನ್‌ಐ ವರದಿ ಮಾಡಿದೆ. 

ಮಮತಾ ಭೇಟಿಗೆ ಮುನ್ನ ನಾಯ್ಡು ಅವರು ಮಹಾಘಟಬಂಧನ ರಚನಾರ್ಥವಾಗಿ ಈಗಾಗಲೇ ಜೆಡಿಎಸ್‌ ಮುಖ್ಯಸ್ಥ, ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಮತ್ತು ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್‌ ಅವರನ್ನು ಭೇಟಿಯಾಗಿದ್ದಾರೆ.

ಮಮತಾ ಅವರ ಭೇಟಿಯ ಬಳಿಕ ನಾಯ್ಡು ಅವರು ಪ್ರಸ್ತಾವಿತ ಮಹಾಘಟಬಂಧನದ ಎಲ್ಲ ಮಿತ್ರ ಪಾಲುದಾರರನ್ನು ನ.22ರಂದು ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next