Advertisement

ಮಹಾಘಟಬಂಧನಗಳು ದೇಶದಲ್ಲಿ ವಿಫ‌ಲ: ವಿತ್ತ ಸಚಿವ ಅರುಣ್‌ ಜೇತ್ಲಿ

03:41 PM Oct 06, 2018 | udayavani editorial |

ಹೊಸದಿಲ್ಲಿ : ದೇಶದಲ್ಲಿ ಮಹಾಘಟಬಂಧನಗಳನ್ನು ಪ್ರಯತ್ನಿಸಿ, ಪರೀಕ್ಷಿಸಿದ ಬಳಿಕ ಅವು ವಿಫ‌ಲಗೊಂಡಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಹೇಳಿದ್ದಾರೆ. 

Advertisement

ಒಂದೊಮ್ಮೆ ಈ ರೀತಿಯ ಮಹಾಘಟಬಂಧನವನ್ನು 2019ರ ಮಹಾಚುನಾವಣೆಯಲ್ಲೂ ರೂಪಿಸಲಾದರೆ ಅದು ಪ್ರಬಲ ನಾಯಕನ ನೇತೃತ್ವದ ಸ್ಥಿರ ಸರಕಾರದ ವಿರುದ್ಧದ ಅರಾಜಕ ಕೂಟದ ವ್ಯರ್ಥ ಹೋರಾಟವಾಗುತ್ತದೆ ಎಂದು ಜೇತ್ಲಿ ಹೇಳಿದರು. 

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿಚ್ಚಳ ಬಹುಮತದೊಂದಿಗೆ ಗೆದ್ದು ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು “ದೇಶವು ಅಭಿವೃದ್ಧಿ ಪಥದಲ್ಲಿ ನಿಶ್ಚಿತವಾಗಿ ಮುಂದುವರಿಯುತ್ತಿರುವ ಈ ಸಂದರ್ಭದಲ್ಲಿ ಅರಾಜಕ ಕೂಟವನ್ನು ಪರೀಕ್ಷೆಗಿಡುವುದು ಸಮಂಜಸವಲ್ಲ’ ಎಂದು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next