Advertisement

ಬೆಂಬಲಿಗರಿಗೆ ಟಿಕೆಟ್‌ ಕೇಳಿದ ಮಾತೆ ಮಹಾದೇವಿ

12:21 PM Apr 15, 2018 | Team Udayavani |

ಬೆಂಗಳೂರು: ಬಸವಕಲ್ಯಾಣದಲ್ಲಿ ಲಿಂಗಾಯತ ಸಮುದಾಯದ ಆನಂದ ದೇವಪ್ಪಗೆ ಟಿಕೆಟ್‌ ನೀಡುವಂತೆ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮುಂಚೂಣಿಯಲ್ಲಿದ್ದ ಮಾತೆ ಮಹಾದೇವಿ, ಲಿಂಗಾಯತರಿಗೆ ಅಲ್ಪ ಸಂಖ್ಯಾತರ ಮಾನ್ಯತೆ ನೀಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಎಂದು ಬಹಿರಂಗ ಹೇಳಿಕೆ ನೀಡಿದ್ದರು.

Advertisement

ಬಸವಕಲ್ಯಾಣ ಲಿಂಗಾಯತ ಸಮುದಾಯದ ಧರ್ಮ ಕ್ಷೇತ್ರವಾಗಿರುವುದರಿಂದ ಅಲ್ಲಿ ಬಸವ ತತ್ವ ನಿಷ್ಠ ಲಿಂಗಾಯತರು ಶಾಸಕರಾಗಬೇಕು. ಹೀಗಾಗಿ ಆನಂದ ದೇವಪ್ಪ ಅರ್ಹ ವ್ಯಕ್ತಿಯಾಗಿದ್ದು, ಅವರಿಗೆ ಟಿಕೆಟ್‌ ನೀಡಿದರೆ, ಲಿಂಗಾಯತರು ಕಾಂಗ್ರೆಸ್‌ಗೆ ಮತ ಹಾಕಿ ಎಂದಿರುವ ನಮ್ಮ ಕರೆ ಸಾರ್ಥಕವಾಗುತ್ತದೆ ಎಂದು ಮಾತೆ ಮಹಾದೇವಿ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next