Advertisement

ಮಹದಾಯಿ: ಕೆಲವೇ ದಿನದಲ್ಲಿ ಶುಭ ಸುದ್ದಿ -ಜಗದೀಶ ಶೆಟ್ಟರ್‌

07:30 AM Dec 12, 2017 | Team Udayavani |

ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ಬಿಜೆಪಿ ಯಾವುದೇ ಮನರಂಜನೆಗೆ ಮುಂದಾಗಿಲ್ಲ. ಕೆಲವೇ ದಿನಗಳಲ್ಲಿ ಶುಭ ಸಮಾಚಾರ ಎಲ್ಲರಿಗೂ ಗೊತ್ತಾಗಲಿದೆ. ಆಗ ನಮ್ಮ ಯತ್ನ ಮನರಂಜನೆಯೋ ಅಥವಾ ಪ್ರಾಮಾಣಿಕ ಪ್ರಯತ್ನವೋ ಎಂಬುದು ತಿಳಿಯಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ತಿಳಿಸಿದರು. 

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿಯಿಂದ ನೀರು ತರುವ ವಿಚಾರದಲ್ಲಿ ಬಿಜೆಪಿ ನಾಯಕರು ರಾಜ್ಯದ ಹಿತ ಕಾಯುವ ಕಾರ್ಯ ಮಾಡದೆ ರಾಜಕೀಯ ಲಾಭದ ಹೇಳಿಕೆ ನೀಡುತ್ತಿದ್ದಾರೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲರ ಹೇಳಿಕೆಗೆ ತಿರುಗೇಟು ನೀಡಿದರು. ಮಹದಾಯಿಯಿಂದ ನೀರು ತರುವ ವಿಚಾರದಲ್ಲಿ ಗಂಭೀರ ಯತ್ನ ನಡೆದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next