Advertisement

ಗುಂಡೇಟಿನಿಂದ ಗಾಯಗೊಂಡಿದ್ದ ಮಹಾದೇವ ಭೈರಗೊಂಡ ಆಸ್ಪತ್ರೆಯಿಂದ ಡಿಸ್ಚಾರ್ಜ್

05:08 PM Dec 17, 2020 | sudhir |

ವಿಜಯಪುರ : ನವೆಂಬರ್ 2 ರಂದು ಗುಂಡಿನ ದಾಳಿಯಲ್ಲಿ ಗಾಯ ಗೊಂಡಿದ್ದ ಮಹಾದೇವ ಭೈರಗೊಂಡ ಚಿಕಿತ್ಸೆ ಪಡೆದು ಗುರುವಾರ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾನೆ.

Advertisement

ಕನ್ನಾಳ ಕ್ರಾಸ್ ಬಳಿ ನಡೆದ ಗುಂಡಿನ ದಾಳಿಯಿಂದಾಗಿ ಗಾಯಗೊಂಡಿದ್ದ ಮಹಾದೇವ ಭೈರಗೊಂಡ, ಒಂದುವರೆ ತಿಂಗಳಿಂದ ಹೈದ್ರಾಬಾದನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುರುವಾರ ಚಡಚಣ ತಾಲೂಕಿನ ತವರು ಗ್ರಾಮ ಕೆರೂರಗೆ ಮರಳಿ ಬಂದಿದ್ದಾನೆ.

ನವೆಂಬರ್ 2 ರಂದು ಮಹಾದೇವ ಭೈರಗೊಂಡ ವಿಜಯಪುರ ನಗರದಿಂದ ಸ್ವಗ್ರಾಮಕ್ಕೆ ಕಾರಿನಲ್ಲಿ ಮರಳುವಾಗ ಕನ್ನಾಳ ಕ್ರಾಸ್ ಬಳಿ ಟಿಪ್ಪರ್ ಡಿಕ್ಕಿ ಹೊಡೆಸಿ, ಕಲ್ಲು ತೂರಾಟ ಮಾಡಿ, ಬಳಿಕ ಗುಂಡಿನ ದಾಳಿ ನಡೆಸಲಾಗಿತ್ತು.

ಇದನ್ನೂ ಓದಿ:ರಸ್ತೆಯಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಬಿದ್ದ ಸಿಮೆಂಟ್ ಕಂಬ : ಬೆಚ್ಚಿ ಬೀಳಿಸುತ್ತೆ ವಿಡಿಯೋ

ಘಟನೆಯಲ್ಲಿ ಇಬ್ಬರು ಮೃತಪಟ್ಟು, ಭೈರಗೊಂಡ ಗುಂಡೇಟಿನಿಂದ ಗಾಯಗೊಂಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು, ಪ್ರಮುಖ ಅರೋಪಿ ಸೇರಿ 31 ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಮಹಾದೇವ ಭೈರಗೊಂಡ ಗುಂಡೇಟಿನ ಗಾಯಕ್ಕೆ ಚಿಕಿತ್ಸೆ ಪಡೆದು ಗ್ರಾಮಕ್ಕೆ ಮರಳಿದ ಸುದ್ದಿ ತಿಳಿದು ಭೈರಗೊಂಡ ಅಭಿಮಾನಿಗಳು ಕೆರೂರ ಗ್ರಾಮದ ಅವರ ನಿವಾಸಕ್ಕೆ ತಂಡೋಪ ತಂಡವಾಗಿ ಆರೋಗ್ಯ ವಿಚಾರಿಸಲಯ ಬರತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next