Advertisement

ಮಹಾರಾಷ್ಟ್ರ : ಬಿಜೆಪಿ ಕೌನ್ಸಿಲರ್‌ ಕೊಲೆ; 6 ಸಹೋದರರ ವಿರುದ್ಧ ಕೇಸು

10:54 AM Jan 19, 2019 | Team Udayavani |

ಬೀಡ್‌ : ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಅಂಬಾಜೊಗಾಯಿ ಯ ಬಿಜೆಪಿ ಕೌನ್ಸಿಲರ್‌ ವಿಜಯ್‌ ಶೇಷರಾವ್‌ ಜೋಗ್‌ದಂಡ್‌ (34) ಅವರನ್ನು  ನಿನ್ನೆ  ಶುಕ್ರವಾರ ಕೊಲೆಗೈಯಲಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಸಹೋದರರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

Advertisement

ಕೌನ್ಸಿಲರ್‌ ವಿಜಯ ಶೇಷರಾವ್‌ ಅವರು ಆರೋಪಿ ಮತ್ತು ಆತನ ಕಿರಿಯ ಸಹೋದರ ನಿತಿನ್‌ ನಡುವಿನ ವಿವಾದದಲ್ಲಿ ಮಧ್ಯಪ್ರವೇಶಿಸಿದಾಗ ಅವರನ್ನು  ತಲವಾರಿನಿಂದ ಕೊಲ್ಲಲಾಗಿತ್ತು. 

ಶುಕ್ರವಾರ ರಾತ್ರಿ 8 ಗಂಟೆಯ ವೇಳೆಗೆ ನಿತಿನ್‌ ಸಮತಾ ನಗರ ಸಮೀಪ ಇದ್ದಾಗ ಆರು ಮಂದಿ ಸಹೋದರರು ಅಲ್ಲಿಗೆ ಬಂದು ಯಾವುದೋ ಹಳೇ ದ್ವೇಷದಲ್ಲಿ, ಆತನ ಮೇಲೆ ದಾಳಿ ನಡೆಸಿದರು. ಇದನ್ನು ತಡೆಯಲು ಬಂದ ಕೌನ್ಸಿಲರ್‌ ವಿಜಯ್‌ ಅವರ ಮೇಲೆ ಆರೋಪಿಗಳು ತಲವಾರಿನಿಂದ ದಾಳಿ ಮಾಡಿದರು. 

ಗಂಭೀರವಾಗಿ ಗಾಯಗೊಂಡ ವಿಜಯ್‌ ಅವರನ್ನು ಸಮೀಪದ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಆರೋಪಿಗಳಾಗಿರುವ ಆರು ಸಹೋದರರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು ಇತರ ನಾಲ್ವರಿಗೆ ಶೋಧ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next